ಜಾಲ್ಸೂರು: 46ನೇ ವರ್ಷದ ಏಕಾಹ ಭಜನಾ ಮಹೋತ್ಸವ, ದೀಪಪ್ರತಿಷ್ಠೆ ಮುಖಾಂತರ ಭಜನಾ ಮಂಗಲೋತ್ಸವಕ್ಕೆ ಚಾಲನೆ

0

ಜಾಲ್ಸೂರಿನ ಶ್ರೀ ಗುರುರಾಘವೇಂದ್ರ ಸ್ವಾಮಿ ಭಜನಾ ಮಂದಿರದ 46ನೇ ವರ್ಷದ ಏಕಾಹ ಭಜನಾ ಮಹೋತ್ಸವಕ್ಕೆ ಡಿ.3ರಂದು ಬೆಳಿಗ್ಗೆ ದೀಪ ಪ್ರತಿಷ್ಠೆಯ ಮೂಲಕ ಚಾಲನೆ ನೀಡಲಾಯಿತು.


ಬ್ರಹ್ಮಶ್ರೀ ವೇ. ಮೂ. ಪುರೋಹಿತ ನಾಗರಾಜ ಭಟ್ ಅವರ ನೇತೃತ್ವದಲ್ಲಿ ಶ್ರೀ ಗುರುರಾಘವೇಂದ್ರ ಸ್ವಾಮಿಗೆ ಪೂಜೆ ಮೂಲಕ ದೀಪಪ್ರತಿಷ್ಠೆ ನಡೆಸಿ, ಭಜನಾ ಮಂಗಲೋತ್ಸವಕ್ಕೆ ಚಾಲನೆ ನೀಡಲಾಯಿತು.


ಈ ಸಂದರ್ಭದಲ್ಲಿ ಭಜನಾ ಮಂದಿರದ ಅಧ್ಯಕ್ಷ ಎಸ್. ಬಾಬು ಪಾಟಾಳಿ ಅರಿಯಡ್ಕ, ಕಾರ್ಯದರ್ಶಿ ಮೋಹನ ಬೆಳ್ಚಪ್ಪಾಡ ಜಾಲ್ಸೂರು, ಮಂದಿರದ ಅರ್ಚಕ ಪುರೋಹಿತ ರಾಮಕೃಷ್ಣ ಭಟ್ ಪೆರಂಬಾರು, ಸೇರಿದಂತೆ ಮಂದಿರದ ಪದಾಧಿಕಾರಿಗಳು ಸೇರಿದಂತೆ ಜಾಲ್ಸೂರು ಹಾಗೂ ಕನಕಮಜಲು ಗ್ರಾಮದ ಭಕ್ತಾದಿಗಳು ಉಪಸ್ಥಿತರಿದ್ದರು.
ಭಜನಾ ಮಂಗಲೋತ್ಸವದಲ್ಲಿ ವಿವಿಧ ಭಜನಾ ತಂಡಗಳಿಂದ ಭಜನಾ ಮಹೋತ್ಸವವು ಜರುಗಲಿದೆ.