ಸಕ್ಷಮ ಕರ್ನಾಟಕ ಸಂಘಟನೆಗೆ ರಾಜ್ಯ ಪ್ರಶಸ್ತಿ- ಕಾರ್ಯದರ್ಶಿ ಡಾ.ಹರಿಕೃಷ್ಣ ರೈ ಪ್ರಶಸ್ತಿ ಸ್ವೀಕಾರ

0

ಈ ವರ್ಷದ ವಿಶ್ವ ವಿಶೇಷಚೇತನರ ದಿನಾಚರಣೆ 2022ರ ಪ್ರಯುಕ್ತ ಕರ್ನಾಟಕ ರಾಜ್ಯ ಸರಕಾರದ ದಿವ್ಯಾಂಗ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ, ದಿವ್ಯಾಂಗ ಕ್ಷೇತ್ರದಲ್ಲಿ ಅತ್ತ್ಯುತ್ತಮ ಸೇವೆ ಸಲ್ಲಿಸಿರುವ ಸಂಘಟನೆಗಳಿಗೆ ಕೊಡಲ್ಪಡುವ ರಾಜ್ಯ ಸೇವಾ ಪ್ರಶಸ್ತಿಗೆ ಸಕ್ಷಮ ಕರ್ನಾಟಕ ಸಂಘಟನೆ ಆಯ್ಕೆಗೊಂಡಿದೆ. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಡಿ.3ರಂದು ನಡೆದ ವಿಶ್ವ ವಿಶೇಷಚೇತನ ದಿನಾಚರಣೆಯ ಸಂದರ್ಭದಲ್ಲಿ ರಾಜ್ಯದ ಮುಖ್ಯ ಮಂತ್ರಿಗಳಾದ ಬಸವರಾಜ್ ಬೊಮ್ಮಾಯಿವರು ಹಾಗು ದಿವ್ಯಾಂಗ ಇಲಾಖೆಯ ಸಚಿವರಾದ ಹಾಲಪ್ಪ ಆಚಾರ್ ಇವರ ಉಪಸ್ಥಿತಿಯಲ್ಲಿ ರಾಜ್ಯ ಪ್ರಶಸ್ತಿಯನ್ನು ಸಕ್ಷಮ ಸಂಘಟನೆಗೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಮಾಜಮುಖಿ ಸೇವಕಾರ್ಯಗಳನ್ನು ಮಾಡಲು ಪ್ರೇರೇಪಿಸಿದರು. ರಾಜ್ಯ ಪ್ರಶಸ್ತಿ ಲಭಿಸಲು ಕಾರಣೀಕರ್ತರಾದ ಸಕ್ಷಮ ಸಂಘಟನೆಯ ಕಾರ್ಯದರ್ಶಿ ಡಾ.ಹರಿಕೃಷ್ಣ ರೈ ಸುಳ್ಯ ಮತ್ತು ಕಾರ್ಯಕರ್ತರು ಹಾಗೂ ದಾನಿಗಳು ಉಪಸ್ಥಿತರಿದ್ದರು.