ಬೆಳ್ಳಾರೆಯಲ್ಲಿ ಮತದಾರರ ಜಾಗೃತಿ ಜಾಥಾ

0

ಚುನಾವಣಾ ಆಯೋಗದ ನಿರ್ದೇಶನದಂತೆ,ತಾಲೂಕು ಆಡಳಿತ ಸುಳ್ಯ,ಸ್ವೀಪ್ ಸಮಿತಿ ಸುಳ್ಯ,ಮತದಾರರ ಸಾಕ್ಷರತಾ ಸಂಘ,ಹಾಗೂ ಗ್ರಾಮಪಂಚಾಯತ್ ಪೆರುವಾಜೆ,ಗ್ರಾಮಪಂಚಾಯತ್ ಬೆಳ್ಳಾರೆ,ಸರಕಾರಿ ಪ್ರಥಮದರ್ಜೆ ಕಾಲೇಜು ಬೆಳ್ಳಾರೆ,ಕೆಪಿಎಸ್ ಕಾಲೇಜು ಬೆಳ್ಳಾರೆ ಮತ್ತುವಿವಿಧ ರಾಜಕೀಯ ಪಕ್ಷಗಳ ಮುಖಂಡರು/ಪ್ರತಿನಿಧಿಗಳು,ಸ್ಥಳೀಯ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಹಭಾಗಿತ್ವದಲ್ಲಿ ಮತದಾರರ ಜಾಗೃತಿ ಜಾಥಾವು ಡಿ .05ರಂದು ಬೆಳ್ಳಾರೆ ಹಾಗೂ ಪೆರುವಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯಿತು.
ತಹಶೀಲ್ದಾರ್ ಅನಿತಾಲಕ್ಷ್ಮೀ, ತಾಲೂಕು ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್, ಪೆರುವಾಜೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ದಾಮೋದರ ಕಣಜಾಲು, ಕೆ.ಪಿ.ಎಸ್.ಪ್ರಾಂಶುಪಾಲ ವಿಶ್ವನಾಥ ಗೌಡ,ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.