ಡಿ.18 : ಐವರ್ನಾಡು ದೇವಸ್ಥಾನದಲ್ಲಿ ಮಂಜುಶ್ರೀ ಸಿಂಗಾರಿ ಮೇಳದ ರಂಗಪ್ರವೇಶ

0

ಮಂಜುಶ್ರೀ ಗೆಳೆಯರ ಬಳಗ ಪಾಲೆಪ್ಪಾಡಿ ಇದರ ಆಶ್ರಯದಲ್ಲಿ ಮಂಜುಶ್ರೀ ಸಿಂಗಾರಿ ಮೇಳದ ರಂಗಪ್ರವೇಶವು ಡಿ.18 ರಂದು ಸಂಜೆ ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಲಿದೆ.
ಪೂಜಾ ವಿಧಿ ವಿಧಾನಗಳೊಂದಿಗೆ ರಂಗಪ್ರವೇಶ ಕಾರ್ಯಕ್ರಮ ನಡೆಯಲಿದೆ.
ರಾತ್ರಿ ಗಂಟೆ 8.00 ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮಂಜುಶ್ರೀ ಗೆಳೆಯರ ಬಳಗದ ಅಧ್ಯಕ್ಷ ಶಿವಪ್ರಸಾದ್ ದರ್ಖಾಸ್ತು ಅಧ್ಯಕ್ಷತೆ ವಹಿಸಲಿದ್ದಾರೆ.
ಅತಿಥಿಗಳಾಗಿ ಐವರ್ನಾಡು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ,ಗ್ರಾ.ಪಂ.ಅಧ್ಯಕ್ಷ ಬಾಲಕೃಷ್ಣ ಕೀಲಾಡಿ,ದೇವಸ್ಥಾನದ ವ್ಯ.ಸ.ಅಧ್ಯಕ್ಷ ಶ್ರೀನಿವಾಸ ಮಡ್ತಿಲ,ಸದಸ್ಯೆ ಶ್ರೀಮತಿ ತಾರಾ ರಾಜರಾಮ ರಾವ್ ,ಕೇರಳ ಸಿಂಗಾರಿ ಮೇಳದ ತರಬೇತುದಾರ ಚಂದ್ರನ್ ಕಡಕಂ ಭಾಗವಹಿಸಲಿದ್ದಾರೆ.