ಅಡ್ಪಂಗಾಯ ಅಯ್ಯಪ್ಪ ಮಂದಿರದಲ್ಲಿ ಧನು ಸಂಕ್ರಮಣ ವಿಶೇಷ ಪೂಜೆ, ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ನಿಂದ ಸನ್ಮಾನ

0

ಅಡ್ಪಂಗಾಯ ಅಯ್ಯಪ್ಪ ಮಂದಿರದಲ್ಲಿ ಧನು ಸಂಕ್ರಮಣದ ಪ್ರಯುಕ್ತ ವಿಶೇಷ ಪೂಜೆ ಹಾಗೂ ಸಾಮಾಜಿಕ ವಲಯಗಳಲ್ಲಿ ವಿಶಿಷ್ಟ ರೀತಿಯಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಸನ್ಮಾನ ಕಾರ್ಯಕ್ರಮವು ಡಿ.18 ರಂದು ನಡೆಯಿತು.


ಶ್ರೀ ಕ್ಷೇತ್ರದ ಧರ್ಮದರ್ಶಿಗಳೂ ಹಾಗೂ ಗುರುಸ್ವಾಮಿಗಳಾದಂತಹ ಶಿವಪ್ರಕಾಶ್ ಅಡ್ಪಂಗಾಯರ ನೇತೃತ್ವದಲ್ಲಿ ನಡೆಯಿತು. ಸಾಂಯಕಾಲ ಸಂದ್ಯಾಸಮಯದಲ್ಲಿ “ದೀಪಾರಾಧನೆ ” ಯೊಂದಿಗೆ ಜರುಗಿದ ಈ ಕಾರ್ಯಕ್ರಮವು, ಶ್ರೀ. ಧ. ಗ್ರಾ. ಯೋ. ಕಾಂತಮಂಗಲ ಒಕ್ಕೂಟ ಹಾಗೂ ಅಲ್ಲಿನ ನವಜೀವನ ಸಮಿತಿಯ ಸದಸ್ಯರುಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.ರಾತ್ರಿ ಮಹಾಪೂಜೆಯೊಂದಿಗೆ ಸಾಗಿದ ಈ ಕಾರ್ಯಕ್ರಮವು ನಂತರ, ವಿವಿಧ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸುತ್ತಿರುವವರಿಗೆ ಅಯ್ಯಪ್ಪ ಸ್ವಾಮೀ ಸೇವಾ ಟ್ರಸ್ಟ್ ವತಿಯಿಂದ ಸನ್ಮಾನ ಕಾರ್ಯಕ್ರಮವು ನಡೆಯಿತು. ನವಜೀವನ ಸಮಿತಿಯ ಸದಸ್ಯರುಗಳಾಗಿ ಮದ್ಯಮುಕ್ತ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸುತ್ತಿರುವ ಬಾಲಸುಬ್ರಹ್ಮಣ್ಯ ಮುಳ್ಯ ಅಟ್ಲೂರು, ವಾಸುದೇವ ಬಸವನಪಾದೆ ಹಾಗೂ ಮಂಡೆಕೋಲು ಗ್ರಾಮದ ಆಶಾಕಾರ್ಯಕರ್ತೆಯರಾದ, ಶ್ರೀಮತಿ ಭಾರತಿ ಮಂಡೆಕೋಲು, ಶ್ರೀಮತಿ ಲಲಿತಾ ಶ್ರೀಮತಿ ಸರೋಜಿನಿ, ಶ್ರೀಮತಿ ಸಾವಿತ್ರಿ, ಶ್ರೀಮತಿ ವಸಂತಿ, ಶ್ರೀಮತಿ ಹೇಮಾವತಿ ಇವರುಗಳನ್ನು ಹಾಗೂ ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿಗಳಾಗಿ ಜನಸೇವೆ ಸಲ್ಲಿಸುತ್ತಿರುವ, ಶ್ರೀಮತಿ ಹೇಮಾವತಿ ಮಂಡೆಕೋಲು, ಶ್ರೀಮತಿ ಭವಾನಿ ಮಂಡೆಕೋಲು, ಶ್ರೀಮತಿ ಹೇಮಲತಾ ಮಂಡೆಕೋಲು ಇವರುಗಳನ್ನು ಶ್ರೀ ಕ್ಷೇತ್ರದ ಧರ್ಮದರ್ಶಿಗಳಾದ ಶಿವಪ್ರಕಾಶ್ ಅಡ್ಪಂಗಾಯರವರು ಸನ್ಮಾನ ಪತ್ರ, ಫಲ-ಪುಷ್ಪಗಳೊಂದಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ನಿವೃತ್ತ ಬ್ಯಾಂಕ್ ಉದ್ಯೋಗಿಗಳಾದ ಹೊನ್ನಪ್ಪ ಗೌಡ ಅಡ್ಪಂಗಾಯ ಹಾಗೂ ಶ್ರೀಮತಿ ಚಂದ್ರಾವತಿ, ಗಂಗಯ್ಯ ಗೌಡ ಮಾಣಿ, ಸುಬ್ಬ ಪಾಟಾಳಿ ಕಾಂತಮಂಗಲ, ಹಾಗೂ ಅಯ್ಯಪ್ಪ ವ್ರತಧಾರಿಗಳು ಹಾಗೂ ಊರ-ಪರ ಊರ ಭಕ್ತಾದಿಗಳು ಉಪಸ್ಥಿತರಿದ್ದರು.ಬಳಿಕ ಶ್ರೀ ದೇವರ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.