ಮಧುಸೂದನ ಉಳುವಾರು ನಿಧನ

0

ಅರಂತೋಡು ಗ್ರಾಮದ ಉದಯನಗರ ಸಮೀಪದ ಉಳುವಾರು ನಿವಾಸಿ ಮಧುಸೂದನ ಇಂದು ಮುಂಜಾನೆ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.


ಅವರು ಪೆರಾಜೆ ಭಾಗದಲ್ಲಿ ಕೆಲಸ ಮಾಡುತ್ತಿರುವಾಗ ಅಸೌಖ್ಯಕ್ಕೆ ಒಳಗಾಗಿದ್ದರು. ತಕ್ಷಣ ಅವರನ್ನು ಜೊತೆಯಲ್ಲಿದ್ದವರು ಕೂಡಲೇ ಸುಳ್ಯ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆ ಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಅವರಿಗೆ ೪೨ ವರ್ಷ ವಯಸ್ಸಾಗಿತ್ತು.
ಆದರೆ ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರೆಂದು ತಿಳಿದುಬಂದಿದೆ.


ಮೃತರು ಪತ್ನಿ ಮಮತಾ, ಪುತ್ರ ಪ್ರೀತಮ್, ಪುತ್ರಿ ಮೌಲ್ಯ, ತಾಯಿ ತಿಲೋತ್ತಮೆ, ಇಬ್ಬರು ಸಹೋದರರನ್ನು ಸಂಬಂಧಿಕರನ್ನು, ಕುಟುಂಬಸ್ಥರನ್ನು ಅಗಲಿದ್ದಾರೆ.