ಸುಳ್ಯದ ಪುರಭವನದಲ್ಲಿ ಸಾಮೂಹಿಕ ಇರುಮುಡಿ ಕಟ್ಟು ಕಟ್ಟುವ ಕಾರ್ಯಕ್ರಮ

0

ಶಬರಿಮಲೆ ಯಾತ್ರೆ ಗೈಯುತ್ತಿರುವ ಅಯ್ಯಪ್ಪ ವೃತಧಾರಿಗಳು ಸುಳ್ಯದ ಪುರಭವನದಲ್ಲಿ ಜ.1 ರಂದು ಇರುಮುಡಿ ಕಟ್ಟು ಕಟ್ಟುವ ಕಾರ್ಯಕ್ರಮ ಸಾಮೂಹಿಕವಾಗಿ ನಡೆಯಿತು. ಗುರುಸ್ವಾಮಿ ಗಳಾದ ಸಂತೋಷ್ ಜಟ್ಟಿಪಳ್ಳ ,ರಾಮಕೃಷ್ಣ ವಕೀಲರು, ಅವಿನ್ ಪಡ್ಡಂಬೈಲು, ಜನಾರ್ದನ ದೋಳ ರವರ ನೇತೃತ್ವದಲ್ಲಿ ಸುಮಾರು 71ಮಂದಿ ಅಯ್ಯಪ್ಪ ವೃತಧಾರಿಗಳು ಶಬರಿಮಲೆ ಯಾತ್ರೆ ಕೈಗೊಂಡರು. ಬೆಳಗ್ಗಿನಿಂದ ಮಧ್ಯಾಹ್ನ ತನಕ ಕಟ್ಟು ಕಟ್ಟುವ ಕಾರ್ಯವು ನಡೆದು ಪೂಜೆಯಾಗಿ ಅನ್ನ ಸಂತರ್ಪಣೆ ನೆರವೇರಿತು. ಈ ಸಂದರ್ಭದಲ್ಲಿ ಅಯ್ಯಪ್ಪ ವೃತಧಾರಿಗಳ ಬಂಧುವರ್ಗದವರು ಮಿತ್ರರು ಆಗಮಿಸಿ ಯಾತ್ರೆಗೆ ಶುಭ ಹಾರೈಸಿದರು.