ಸುಧೀರ್ ರೈ ಮೇನಾಲರಿಗೆ ಶ್ರದ್ಧಾಂಜಲಿ ಸಭೆ

0


ಅಜ್ಜಾವರ ಗ್ರಾಮದ ಮೇನಾಲದ ವಿಷ್ಣು ಯುವಕ ಮಂಡಲ ಹಾಗು ವಿಷ್ಣು ಕ್ರಿಕೇಟರ್‍ಸ್ ಇದರ ಮಾಜಿ ಅಧ್ಯಕ್ಷರಾದ ದಿ| ಸುಧೀರ್ ರೈ ಮೇನಾಲರಿಗೆ ಶ್ರದ್ಧಾಂಜಲಿ ಸಭೆ ಜ.೮ರಂದು ಮೇನಾಲ ಡಾ| ಬಿ.ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ನಡೆಯಿತು. ಮೇನಾಲ ಕಾಳಿಕಾ ದುರ್ಗಾಪರಮೇಶ್ವರಿ ಕ್ಷೇತ್ರದ ಧರ್ಮದರ್ಶಿ ಪದ್ಮನಾಭ ಸ್ವಾಮಿಗಳು ದೀಪ ಬೆಳಗಿದರು. ಕರ್ಲಪ್ಪಾಡಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಜೇಶ್ ಶೆಟ್ಟಿ ಮೇನಾಲ ನುಡಿನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ನವೀನ್ ರೈ ಮೇನಾಲ, ಹರಿಪ್ರಸಾದ್ ಸುಲಾಯ ಮೇನಾಲ, ಸುಬೋಧ್ ಶೆಟ್ಟಿ ಮೇನಾಲ, ರಂಜಿತ್ ರೈ ಮೇನಾಲ, ಮನೋಹರ, , ಶ್ರೀಧರ ಮೇನಾಲ, ಪ್ರದೀಪ್ ಪೂಜಾರಿ ಪೋಡುಂಬ, ಬಾಲಕೃಷ್ಣ, ಶೌಕತ್ ಬೆಲ್ಯ ಅನಿಸಿಕೆ ವ್ಯಕ್ತ ಪಡಿಸಿದರು. ಪ್ರಸಾದ್ ರೈ ಮೇನಾಲ, ನಾರಾಯಣ ರೈ ಮೇನಾಲ ಮೊದಲಾದವರು ಉಪಸ್ಥಿತರಿದ್ದರು. ಚಂದ್ರಶೇಖರ ಪಲ್ಲತಡ್ಕ ಪ್ರಾಸ್ತಾವಿಕ ಮಾತನಾಡಿದರ, ಮೋಹನ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.