ನಿಡ್ವಾಳ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ
ನಿಡ್ವಾಳ ಶ್ರೀ ಮಹಾವಿಷ್ಣು ಬಳಗದಿಂದ ದೇಣಿಗೆ

0


ಶ್ರೀ ಮಹಾವಿಷ್ಣು ಬಳಗ ನಿಡ್ವಾಳ ಇದರ ವತಿಯಿಂದ ಕ್ರಿಕೆಟ್ ಪಂದ್ಯಾಟವು ಜ. 22 ಕರಿಕ್ಕಳದಲ್ಲಿ ನಡೆಯಿತು. ಪಂದ್ಯಾಟದಲ್ಲಿ ವಿಜೇತ ತಂಡದಿಂದ ಮತ್ತು ಪಂದ್ಯಾಟದ ಉಳಿಕೆ ಹಣವನ್ನು ನಿಡ್ವಾಳ ಶ್ರೀ ಮಹಾವಿಷ್ಣು ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ದೇಣಿಗೆಯಾಗಿ ನೀಡಲಾಯಿತು.


ಕಾರ್ಯಕ್ರಮದಲ್ಲಿ ಕುಶಾಲ್ ಮೇಲ್ಪಾಡಿ ಸಭಾಧ್ಯಕ್ಷತೆ
ವಹಿಸಿದ್ದರು. ಕುಶಾಲಪ್ಪ ಬರಮೇಲು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶ್ರೀ ಮಹಾವಿಷ್ಣು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಚಂದ್ರಪ್ರಕಾಶ್ ಕಂಬಳ,ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು ನೇಮಿರಾಜ ಪಲ್ಲೋಡಿ , ಕಾರ್ಯದರ್ಶಿ ಕುಸುಮಾಧರ ಕರಿಮಜಲು ಉಪಸ್ಥಿತರಿದ್ದರು. ಶ್ರೀ ಮಹಾವಿಷ್ಣು ಗೆಳೆಯರ ಬಳಗ ಪ್ರಥಮ ಸ್ಥಾನ ಪಡೆದು ರೂ.10,000 ನಗದು ಬಹುಮಾನ ಪಡೆಯಿತು.

ಈ ಮೊತ್ತವನ್ನು ಮತ್ತು ಪಂದ್ಯಾಟದಲ್ಲಿ ಉಳಿಕೆ ರೂ.9201ಒಟ್ಟು ಮೊತ್ತ ರೂ 19,201 ವನ್ನು ಶ್ರೀ ಮಹಾವಿಷ್ಣು ದೇವಸ್ಥಾನದ ಜೀರ್ಣೋದ್ಧಾರ ಮಂಡಳಿಯ ಅಧ್ಯಕ್ಷ ನೇಮಿರಾಜ ಪಲ್ಲೋಡಿ ರವರಿಗೆ ಹಸ್ತಾಂತರಿಸಲಾಗಿದೆ. ಸುರೇಶ್ ಅತ್ಯಡ್ಕ ನಿರೂಪಿಸಿದರು ಮತ್ತು ವಂದಿಸಿದರು