ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನ ಗುಂಡಿಹಿತ್ಲು ಪ್ರತಿಷ್ಠಾ ವಾರ್ಷಿಕೋತ್ಸವ ಸಂಪನ್ನ

0

ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನ ಗುಂಡಿಹಿತ್ಲು ಇದರ ಪ್ರತಿಷ್ಠಾ ವಾರ್ಷಿಕೋತ್ಸವ ಜ.25 ಜ.26 ರಂದು ನಡೆಯಿತು.

ಜ.25 ರ ಬೆಳಿಗ್ಗೆ ಗಣಪತಿ ಹವನ ನಂತರ ನಾಗ ತಂಬಿಲ ನಡೆದು ಭಜನಾ ಕಾರ್ಯಕ್ರಮ ಜರಗಿತು. ಮಧ್ಯಾಹ್ನ ಮಹಾಪೂಜೆ ಬಳಿಕ ಅನ್ನ ಸಾರ್ವಜನಿಕ ಸಂತರ್ಪಣೆ ನಡೆಯಿತು. ಜ.26 ರ ಬೆಳಗ್ಗೆ ಪರಿವಾರ ದೈವಗಳ ಹರಕೆಯ ನೇಮೋತ್ಸವ ನಡೆಯಿತು. ಆಡಳಿತ ಮಂಡಳಿಯ ಅಧ್ಯಕ್ಷ ಜನಾರ್ಧನ ಗುಂಡಿಹಿತ್ಲು, ಉಪಾಧ್ಯಕ್ಷ ಶರತ್ ಭಾಗವತ್, ಖಜಾಂಜಿ ಮಣಿಕಂಠ ಕಟ್ಟ, ಕಾರ್ಯದರ್ಶಿ ಬಿಂದು ಪಿ, ಜೊತೆ ಕಾರ್ಯದರ್ಶಿ ಸತೀಶ್ ಟಿ ಎನ್, ಆಡಳಿತ ಮಂಡಳಿಯ ಸದಸ್ಯರುಗಳಾದ ನಾರಾಯಣಯ್ಯ ಕೇಮಾಟಿ, ನಿತ್ಯಾನಂದ ಭೀಮಗುಳಿ, ನಾರಾಯಣ, ನಾರಾಯಣ ಮುಳ್ಳುಬಾಗಿಲು, ಸುರ್ಜಿತ್ ಶರ್ಮಾ ಗುಂಡಿಹಿತ್ಲು, ರಾಜೀವ ಪೆರ್ಮುಕಜೆ, ಮಣಿಕಂಠ ಕೊಳಗೆ, ಹರೀಶ್ ಎಚ್, ನಿಶಾಂತ್ ಕಟ್ಟ, ಶಶಿಕಲಾ ಹರಿಹರ, ಹುಕ್ರಪ್ಪ ನಾಯ್ಕ, ವಿಶ್ವನಾಥ ಮುಂಡೋಡಿ, ಮನೀಶ್ ಪಲ್ಲತಡ್ಕ, ರೋಹಿದಾಸ್ ಹರಿಹರ ಅಲ್ಲದೆ ಸಾರ್ವಜನಿಕರು ಸಹಕರಿಸಿದರು.