ಮಾಪಳಡ್ಕ ಮಖಾಂ ಉರೂಸ್ ಹಾಗೂ ಮೂರು ದಿನಗಳ ಧಾರ್ಮಿಕ ಮತ ಪ್ರಭಾಷಣ ಕಾರ್ಯಕ್ರಮಕ್ಕೆ ಚಾಲನೆ

0

ಮಾ.30 ಪೆರೋಡ್ ಉಸ್ತಾದ್ ಪ್ರಬಾಷಣ ಹಾಗೂ ಅನ್ನದಾನ

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಮಾಪಳಡ್ಕ ಮಖಾಂ ಉರೂಸ್ ಹಾಗೂ ಮೂರು ದಿನಗಳ ಧಾರ್ಮಿಕ ಮತಪ್ರವಚನ ಕಾರ್ಯಕ್ರಮಕ್ಕೆ ಜ.28ರಂದು ಇರುವಂಬಳ್ಳ ಜಮಾಯತ್ ಕಮಿಟಿ ಹಾಗೂ ಮಾಪಳಡ್ಕ ದರ್ಗಾ ಶರೀಫ್ ಅಧ್ಯಕ್ಷ ಎ.ಬಿ ಅಶ್ರಫ್ ಸಹದಿ ಧ್ವಜಾರೋಹಣ ನೆರೆವೆರಿಸಿ ಉರೂಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


ಜನವರಿ28 ರಂದು ಶನಿವಾರ ಸಂಜೆ ಜಮಾಯತ್ ಕಮಿಟಿಯ ಗೌರವಧ್ಯಕ್ಷರಾದ ಹಾಜಿ ಇಬ್ರಾಹಿಂ ಸಂಕೇಶ ರವರ ಅಧ್ಯಕ್ಷತೆ ವಹಿಸಿದರು.

ಸಯ್ಯದ್ ಹಕೀಮ್ ತಂಙಳ್ ಅದೂರ್ ಉರೂಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ದುವಾಶಿರ್ವಚನ ಮೂಲಕ ಚಾಲನೆ ನೀಡಿದರು.
ಅನ್ವರ್ ಸಾದಿಕ್ ಸಖಾಫಿ ಮುಖ್ಯ ಪ್ರಭಾಷಣ ಮಾಡಿದರು.


ಜ.30 ಉರೂಸ್ ಸಮಾರೋಪ ಸಮಾರಂಭ
ಜ.30 ರಂದು ನಡೆಯಲಿರುವ ಉರೂಸ್ ಸಮಾರೋಪ ಸಮಾರಂಭದಲ್ಲಿ ಅಸ್ಸಯ್ಯದ್ ಝೈನುದ್ದೀನ್ ಅಲ್ ಬುಖಾರಿ ಕೂರಿಕೂಯಿ ತಂಙಳ್ ದುವಾಶಿರ್ವಚನ ಕಾರ್ಯಕ್ರಮಕ್ಕೆ ನೇತೃತ್ವ ವಹಿಸಲಿದ್ದಾರೆ.
ಇಸ್ಲಾಂ ಧಾರ್ಮಿಕ ಮತ ವಿದ್ವಾಂಸರಾದ ಮೌಲನ ಪೆರೋಡ್ ಅಬ್ದುಲ್‌ ರಹಮಾನ್‌ ಸಖಾಫಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.
ಸಮಾರೋಪ ಸಮಾರಂಭದ ಕೊನೆಯಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.