ಫೆ.15 – 16: ಶ್ರೀ ಮಹಾವಿಷ್ಣುಮೂರ್ತಿ ಗಡಿಕಲ್ಲು ಒತ್ತೆಕೋಲ

0

ಕೊಲ್ಲಮೊಗು ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನ ಗಡಿಕಲ್ಲು ಇಲ್ಲಿ ಫೆ. 15 ಮತ್ತು ಫೆ.16 ರಂದು ಒತ್ತೆಕೋಲ ಉತ್ಸವ ನಡೆಯಲಿದೆ.


ಫೆ.8 ರಂದು ಗೊನೆ ಕಡಿಯಲಾಗಿದೆ. ಫೆ.15 ರ ಪ್ರಾತಃಕಾಲ ಅಗ್ನಿಕುಂಡ ಜೋಡಣೆ ಪ್ರಾರಂಭವಾಗಲಿದ್ದು
ಬೆಳಗ್ಗೆ ಗಣಪತಿ ಹೋಮ, ಉಗ್ರಾಣ ಮುಹೂರ್ತ‌ ನಡೆದು ಮಧ್ಯಾಹ್ನ ಮಹಾಪೂಜೆ ನಡೆದು ಅನ್ನಸಂತರ್ಪಣೆ ನಡೆಯಲಿದೆ.

ಸಂಜೆ ಗಂಟೆ 6-00ಕ್ಕೆ : ಸ್ಥಾನದಿಂದ ಭಂಡಾರ ತೆಗೆದು, ಸಂಜೆ ಗಂಟೆ 6-45ಕ್ಕೆ : ತೊಡಂಙಲ್ ನಡೆದು ರಾತ್ರಿ ಗಂಟೆ 7-00ಕ್ಕೆ ಮೇಲೇರಿಗೆ ಅಗ್ನಿ ಸ್ಪರ್ಶ ನಡೆಯಲಿದೆ. ರಾತ್ರಿ ಗಂಟೆ 8-30 ರಿಂದ ಅಂಗನವಾಡಿ ಪುಟಾಣಿಗಳಿಂದ ಹಾಗೂ ಶಾಲಾವಿದ್ಯಾರ್ಥಿಗಳಿಂದ ಮತ್ತು ಸ್ಥಳೀಯ ಸಂಘ ಸಂಸ್ಥೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಅನ್ನಸಂತರ್ಪಣೆ , ರಾತ್ರಿ ಗಂಟೆ 11-00ರಿಂದ – ಶ್ರೀ ದೈವದ ಕುಳ್ಚಾಟ ನಡೆಯಲಿದೆ. 12-30ರಿಂದ – ಗೆಳೆಯರ ಬಳಗ ಗಡಿಕಲ್ಲು ಇವರ ಪ್ರಾಯೋಜಕತ್ವದಲ್ಲಿ “ಸ್ಟಾರ್ ವಾಯ್ಸ್ ಮೆಲೋಡಿಸ್ ಮಂಗಳೂರು ಇವರಿಂದ ಸಂಗೀತ ರಸಮಂಜರಿ ಜರುಗಳಿದೆ. ಫೆ. 16 ಬೆಳಗ್ಗೆ ಗಂಟೆ 4-30 ರಿಂದ ಶ್ರೀ ದೈವದ ಅಗ್ನಿ ಪ್ರವೇಶ ನಡೆಯಲಿದೆ. ಬಳಿಕ ದೈವದ ಬಾರಣೆ, ಮಾರಿಕಳ ನಡೆದು ಬಳಿಕ ಗುಳಿಗ ದೈವದ ನೇಮ ನಡೆದು ಪ್ರಸಾದ ವಿತರಣೆ ನಡೆಯಲಿದೆ.