ದೇವಚಳ್ಳ : ಮಣಿಯೂರುಗುಡ್ಡೆ – ಭಟ್ಟಕಜೆ ಕಾಂಕ್ರೀಟ್ ರಸ್ತೆಯ ಉದ್ಘಾಟನೆ

0

ಶಾಸಕ ಅಂಗಾರರವರ ೧೦ ಲಕ್ಷ ಅನುದಾನದಲ್ಲಿ ನಿರ್ಮಾಣಗೊಂಡ ದೇವಚಳ್ಳ ಗ್ರಾಮದ ಮಣಿಯೂರು ಗುಡ್ಡೆ – ಭಟ್ಟಕಜೆ ರಸ್ತೆ ಕಾಂಕ್ರೀಟ್‌ನ ಉದ್ಘಾಟನೆ ಫೆ. ೨೧ರಂದು ನಡೆಯಿತು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೆಂಕಟ್ ವಳಲಂಬೆ ದೀಪ ಬೆಳಗಿಸಿ, ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ರಿಬ್ಬನ್ ಕಟ್ ಮಾಡುವುದರ ಮೂಲಕ ಉದ್ಘಾಟಿಸಿದರು. ಊರಿನ ಪ್ರಮುಖರಾದ ವೆಂಕಟ್ರಮಣ ಅಂಬೆಕಲ್ಲು ತೆಂಗಿನ ಕಾಯಿ ಒಡೆಯುವುದತ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮೀನುಗಾರಿಕಾ ನಿಗಮದ ಅದ್ಯಕ್ಷ ರಾದ ಎ.ವಿ. ತೀರ್ಥರಾಮ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಗುತ್ತಿಗಾರು ಇದರ ಅಧ್ಯಕ್ಷರಾದ ವೆಂಕಟ್ ದoಬೆಕೋಡಿ, ಎಪಿಎಂಸಿ ಮಾಜಿ ಅಧ್ಯಕ್ಷ ವಿನಯ ಮುಳುಗಾಡು, ಗ್ರಾಮ ಪಂಚಾಯತ್ ಸದಸ್ಯೆ ಪ್ರೇಮಲತಾ ಕೇರ, ಬೂತ್ ಸಮಿತಿ ಅಧ್ಯಕ್ಷರಾದ ಗಣೇಶ್ ಕೇರ, ನೆಲ್ಲೂರ್ ಕೇಮ್ರಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಧನಂಜಯ ಎರ್ಮೆಟಿ ಹಾಗೂ ಇಂದಿರೇಶ್ ಗುಡ್ಡೆ, ಲೀಲಾದರ ಗುಡ್ಡೆ, ಕೃಷ್ಣಾಕುಮಾರ್ ಅಂಬೆಕಲ್ಲು, ಪ್ರಶಾಂತ್ ಅಂಬೇಕಲ್ಲು, ದಿನೇಶ್ ಕೇರ, ಮನಮೋಹನ ಅಂಬೇಕಲ್ಲು, ಚಂದ್ರ ಶೇಖರ್ ಗುಡ್ಡೆ, ಕಿರಣ್ ಗುಡ್ಡೆ, ಅಪ್ಪು ಕಲ್ಲುಪನೆ, ಪ್ರತೀಕ್ ಗುಡ್ಡೆ ಹಾಗೂ ರಸ್ತೆಯ ಪಲಾನುಭವಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು. ಬಿಜೆಪಿ ಮುಖಂಡರಾದ ಕೃಷ್ಣಯ್ಯ ಮೂಲೆತೋಟ ಸ್ವಾಗತಿಸಿ, ವಂದಿಸಿದರು.