ಅರಂತೋಡಿನಲ್ಲಿ ಶ್ರೀ ಮಲ್ಲಿಕಾರ್ಜುನ ಫ್ಯೂಯಲ್ ರವರ ನಯಾರಾ ಎನರ್ಜಿ ಪೆಟ್ರೋಲ್ ಬಂಕ್ ಶುಭಾರಂಭ

0

ಸುಳ್ಯ ಮಡಿಕೇರಿ ರಾಜ್ಯ ಹೆದ್ದಾರಿ ಮಧ್ಯೆ ಅರಂತೋಡಿನಲ್ಲಿ ಚಿನ್ನಪ್ಪ ಮಾಸ್ತರ್ ಕರಿಂಬಿಯವರ ಮಾಲಕತ್ವದ ‌ಶ್ರೀ ಮಲ್ಲಿಕಾರ್ಜುನ ಫ್ಯೂಯಲ್ ರವರ ನಯಾರಾ ಎನರ್ಜಿ ಪೆಟ್ರೋಲ್ ಬಂಕ್ ಮಾ.1 ರಂದು ಶುಭಾರಂಭ ಗೊಂಡಿತು.

ಪೆಟ್ರೋಲ್ ಪಂಪಿನ ಫ್ಲಾಟ್ ನಂ.1 ನ್ನು ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಶಾಹಿದ್ ಟಿ.ಎಂ. ಹಾಗೂ ಫ್ಲಾಟ್ ನಂ.2 ನ್ನು ಜಿ.ಪಂ.ಮಾಜಿ ಸದಸ್ಯ ಹರೀಶ್ ಕಂಜಿಪಿಲಿ ಯವರು ಉದ್ಘಾಟಿಸಿದರು. ಬಳಿಕ ನಡೆದಸಮಾರಂಭದ ಅಧ್ಯಕ್ಷತೆಯನ್ನು ಅರಂತೋಡು ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಹರಿಣಿ ದೇರಾಜೆ ಯವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿ.ಪಂ.ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಶಾಹಿದ್ ಟಿ.ಎಂ, ಅರಂತೋಡು ತೊಡಿಕಾನ ಸೊಸೈಟಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ವ್ಯ.ಸ.ಅಧ್ಯಕ್ಷ ಯು.ಎಂ.ಕಿಶೋರ್ ಕುಮಾರ್ ಉಳುವಾರು, ಅರಂತೋಡು ವಾಹನ ಚಾಲಕ ಮಾಲಕ ಸಂಘದ ಅಧ್ಯಕ್ಷ ಜನಾರ್ಧನ ಇರ್ಣೆ, ನಯಾರಾ ಪೆಟ್ರೋಲಿಯಂ ಕಂ.ಸೀನಿಯರ್ ಮೇನೇಜರ್ ನವೀನ್ ಶೆಟ್ಟಿ , ಮಲ್ಲಿಕಾರ್ಜುನ ಫ್ಯೂಯಲ್ ಮಾಲಕರಾದ ಶ್ರೀಮತಿ ಪುಷ್ಪಾವತಿ ಮತ್ತು ಚಿನ್ನಪ್ಪ ಮಾಸ್ತರ್ ಕರಿಂಬಿ ಉಪಸ್ಥಿತರಿದ್ದರು.

ಪಾಲುದಾರರಾದ ಪ್ರಹ್ಲಾದ್ ರವರು ಸ್ವಾಗತಿಸಿದರು. ಚಿನ್ನಪ್ಪ ಮಾಸ್ತರ್ ವಂದಿಸಿದರು. ಶಿಕ್ಷಕ ತೀರ್ಥರಾಮ ಅಡ್ಕಬಳೆ ಕಾರ್ಯಕ್ರಮ ನಿರೂಪಿಸಿದರು. ಮಾಲಕರ ಬಂಧು ಮಿತ್ರರು ಆಗಮಿಸಿ ನೂತನ ಸಂಸ್ಥೆಗೆ ಶುಭ ಹಾರೈಸಿದರು.