ಪರಿಸರ ಜಾಗೃತಿಗಾಗಿ ಶಿಕ್ಷಕನ ಸೈಕಲ್ ಸವಾರಿ

0

ಪ್ರತಿನಿತ್ಯ 20ಕಿ.ಮಿ ಪಯಣ

ಶಾಲಾಮಕ್ಕಳಿಗೆ ಪರಿಸರ ಪಾಠ

ಇವರ ಹೆಸರು ಅನ್ಬುಚಾರ್ಲ್ಸ್ ಹದಿನೆಂಟು ವರ್ಷಗಳ ಹಿಂದೆ ನಡೆದ
ಪರಿಸರ ಜಾಗೃತಿಗಾಗಿ ಶಿಕ್ಷಕ ವೃತ್ತಿ ತೊರೆದು ಸೈಕಲ್ ನಲ್ಲಿ ದೇಶ ಪರ್ಯಟನೆಗೆಯ್ಯು ತ್ತಿರುವ ಚಾರ್ಲ್ ಅನಬು ರವರಿಗೆ ಸುಳ್ಯ ದಲ್ಲಿ ಸ್ವಾಗತ “ಸೈಕಲ್ ಬಳಸಿ ಪರಿಸರ ಉಳಿಸಿ”ಧ್ಯೇಯವಾಕ್ಯದೊಂದಿಗೆ 65 ವರ್ಷದ ಅವಿವಾಹಿತನ ಈ ಸಾಧನೆಗೆ ಯೂಟ್ಯೂಬಿನಲ್ಲಿ ಫಿದಾ ವಿವಿಧೆಡೆ ಸಂಘ ಸಂಸ್ಥೆಗಳ ವತಿಯಿಂದ ಸುಳ್ಯದಲ್ಲಿ ಸ್ವಾಗತಿಸಿದರು.

ತಮಿಳುನಾಡಿನ ನಾಮಕಲ್ ನಿವಾಸಿ 65 ವರ್ಷ ಪ್ರಾಯದ ಅವಿವಾಹಿತ ಚಾರ್ಲ್ ಅನುಬು ಕಳೆದ ಏಳು ವರ್ಷಗಳಿಂದ ಸೈಕಲ್ ಮೂಲಕ 20 ರಾಜ್ಯದಲ್ಲಿ ಸಂಚರಿಸಿ ವಿವಿಧ ಶಾಲೆಗಳಿಗೆ ಭೇಟಿಕೊಟ್ಟು 60 ಸಾವಿರಕ್ಕೂ ಹೆಚ್ಚು ಕಿಲೋಮೀಟರ್ ಗಳನ್ನು ಸೈಕಲ್ ನಲ್ಲಿ ಕ್ರಮಿಸಿ, ಇಂದು ಸುಳ್ಯ ಕ್ಕೆ ಆಗಮಿಸಿದಾಗ ಅವರಿಗೆ ಸುಳ್ಯದಲ್ಲಿ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಸ್ವಾಗತಿಸಲಾಯಿತು.

ಪರಿಸರ ಮಾಲಿನ್ಯ ಜಾಗೃತಿಯನ್ನು ಮೂಡಿಸಲು ಯಾತ್ರೆ ಮಾಡುತ್ತಿರುವ ಅನ್ಬು ಪರ್ಯಟನೆ ಬಗ್ಗೆ ವಿವರ ನೀಡಿ, ಈಗಾಗಲೇ 20 ರಾಜ್ಯಗಳಲ್ಲಿ ಪರ್ಯಟನೆ ಮುಗಿಸಿ ವಿವಿಧ ಶಾಲೆಗಳಿಗೆ ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಿ ಪರಿಸರ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇನೆ 25 ವರ್ಷಗಳ ಹಿಂದೆ ಉಚಿತವಾಗಿ ಪ್ರಕೃತಿಯಿಂದ ದೊರೆಯುತ್ತಿದ್ದ ಕುಡಿಯುವ ನೀರು ಇಂದು ಲೀಟರಿಗೆ 20 ರೂಪಾಯಿ ಕೊಟ್ಟು ಕುಡಿಯುವಂತಹ ಸ್ಥಿತಿ ಬಂದಿದೆ.ಪ್ರಕೃತಿಯ ಮೇಲೆ ಮನುಷ್ಯ ಮಾಡುವ ಅತ್ಯಾಚಾರ ಇದೇ ರೀತಿ ಮುಂದುವರಿದರೆ ಭವಿಷ್ಯ ಊಹಿಸಲು ಅಸಾಧ್ಯ ಇಂದಿನ ಜಾಗತಿಕ ಉಷ್ಣಾಂಶ ಮನುಷನ ರೋಗಗಳಿಗೆ ಮತ್ತು ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಮುಂದಿನ ಜನಾಂಗವನ್ನು ರಕ್ಷಿಸಲು ನಾವು ಕಟಿಬದ್ಧರಾಗಿ ಬೇಕಾಗಿದೆ ಎಂದ ಅವರು ನೇಪಾಳ ಗಡಿಯಲ್ಲಿ ಸಂಚರಿಸುವಾಗ ನಕ್ಸಲರ ಕಹಿಘಟನೆ ಬಿಟ್ಟರೆ ಎಲ್ಲಿಯೂ ಭಾಷೆ, ಆಹಾರ ತೊಡಕಾಗಲಿಲ್ಲ ಎಲ್ಲವೂ ನಿರಾತಂಕ ಅನ್ನುತ್ತಾರೆ ಅನ್ಬು ಇನ್ನು ಎಂಟು ರಾಜ್ಯ ಗಳ ಪ್ರವಾಸದೊಂದಿಗೆ ದೇಶ ಪರ್ಯಟನೆ ಮಾಡಿದಂತಹ ಹೆಗ್ಗಳಿಕೆ ಪಾತ್ರರಾಗುವ ಅನ್ಬುರವರಿಗೆ ಸುಳ್ಯದಲ್ಲಿ ಶುಭ ಹಾರೈಸಲಾಯಿತು ಸಂದರ್ಭದಲ್ಲಿ ಮಲೆನಾಡು ಚಾರಿಟೇಬಲ್ ಅಧ್ಯಕ್ಷ ರಿಯಾಜ್ ಕಟ್ಟೆಕ್ಕಾರ್ಸ್, ಸುಳ್ಯ ನಗರ ಪಂಚಾಯಿತಿ ಮಾಜಿ ಸದಸ್ಯ ಕೆ. ಎಂ. ಮುಸ್ತಫ, ಸಂಪಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ನಿರ್ವಹಣಾಧಿಕಾರಿ ವೀರೇಂದ್ರ ಜೈನ್,ಉದ್ಯಮಿ ಸಿದ್ದಿಕಿ ಕೊಕ್ಕೋ ರಾಷ್ಟ್ರೀಯ ಭೌಗೋಳಿಕ ಸರ್ವೆ ಇಲಾಖೆಯ ರಾಜೀವ್ ಕಿಸ್ಕೊ ಮುಂಬೈ, ಉದ್ಯಮಿ ಎಂ ಕೆ ಅಬ್ದುಲ್ ಲತೀಫ್,ಅಬ್ದುಲ್ಲ ಮೇಸ್ತ್ರಿ, ಹಾಜಿ ಜಿ ಇಬ್ರಾಹಿಂ ಸೀಪುಡ್, ದಿನೇಶ್ ಕೊಲ್ಚಾರ್,ಸಂಸುದ್ದೀನ್ ಭಾರತ್ ಶಾಮಿಯಾನ ,ಯು ಬಿ ಬಶೀರ್ ಶೂ ಬಿಝ್ ಮೊದಲಾದವರು ಉಪಸ್ಥಿತರಿದ್ದರು.


ಅವರು ಕೇರಳದಿಂದ ಬಡ್ಡಡ್ಕ ಅಲೆಟ್ಟಿ ಮೂಲಕ ಕರ್ನಾಟಕ ಪ್ರವೇಶಿಸಿದರು ಸುಳ್ಯದಲ್ಲಿ ‌ಅವರಿಗೆ ಅಭೂತಪೂರ್ವ ಸ್ವಾಗತ ಸಿಕ್ಕಿದೆ ಇವತ್ತು ಸರಕಾರಿ ಶಾಲೆಗಳು ರಜೆ ಇದ್ದ ಕಾರಣ ಅವರಿಗೆ ಸರಕಾರಿ ಶಾಲಾ ಮಕ್ಕಳ ಭೇಟಿ ಕಷ್ಟವಾಯಿತು ಎನ್ನುತ್ತಾರೆ ಚಾರ್ಲ್ಸ್
ಇದೇ ಸಂದರ್ಭದಲ್ಲಿ ಸುಳ್ಯದ ಸಂತೃಪ್ತಿ ರೆಸ್ಟೋರೆಂಟ್ ಮಾಲಕ ನವೀನ್ ರವರು ಅವರನ್ನು ಸ್ವಾಗತಿಸಿ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಿದರು.