ಶಾಂತಿನಗರ ದೀಪಾಂಜಲಿ ಮಹಿಳಾ ಭಜನಾ ಮಂಡಳಿಯ ದಶಮಾನೋತ್ಸವದ ಆಮಂತ್ರಣ ಪತ್ರ ಬಿಡುಗಡೆ

0

ಸುಳ್ಯ ಶಾಂತಿನಗರ ಪೈಚಾರು ದೀಪಾಂಜಲಿ ಮಹಿಳಾ ಭಜನಾ ಮಂಡಳಿಯ ದಶಮಾನೋತ್ಸವದ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ಮಾ.3 ರಂದು ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ವಠಾರದಲ್ಲಿ ನಡೆಯಿತು.
ದಶಮಾನೋತ್ಸವದ ಪ್ರಯುಕ್ತ ಶ್ರೀ ರುಕ್ಮಿಣಿ ಸತ್ಯಭಾಮಾ ಸಮೇತ ಶ್ರೀ ಗೋಪಾಲಕೃಷ್ಣ ಕಲ್ಯಾಣ ಮಹೋತ್ಸವವು ಮಾ.26 ರಂದು ನಡೆಯಲಿದ್ದು ಈ ಸಂದರ್ಭದಲ್ಲಿ ದಶ ಸಂಭ್ರಮದ ಹೊತ್ತಗೆ ಭಜನಾ ಪುಸ್ತಕ ಬಿಡುಗಡೆ ಹಾಗೂ ದಶ ವಿಶೇಷ ಗೌರವಾನ್ವಿತರಿಗೆ ಸನ್ಮಾನ ಸಮಾರಂಭವು ನಡೆಯಲಿರುವುದು.
ಚೆನ್ನಕೇಶವ ದೇವಸ್ಥಾನದ ಅರ್ಚಕರ ನೇತೃತ್ವದಲ್ಲಿ ಪ್ರಾರ್ಥಿಸಿ ಹಿರಿಯರಾದ ತಾಲೂಕು ಭಾರತೀಯ ಮಜ್ದೂರ್ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಭಟ್ ರವರು ಆಮಂತ್ರಣ ಪತ್ರವನ್ನು ಬಿಡುಗಡೆಗೊಳಿಸಿದರು. ದೀಪಾಂಜಲಿ ಭಜನಾ ಮಂಡಳಿಯ ಅಧ್ಯಕ್ಷೆ ಹರ್ಷ ಕರುಣಾಕರ ಸೇರ್ಕಜೆ ,ಕಾರ್ಯದರ್ಶಿ ಉಮಾವತಿ ಯಸ್ ಹಾಗೂ ಚೆನ್ನಕೇಶವ ಜಾಲ್ಸೂರು, ಹೇಮಲತಾ ದೇಂಗೋಡಿ, ನೀಲಾವತಿ ಕಲ್ಲಾಜೆ, ಕುಸುಮಾ ಜನಾರ್ದನ, ಕುಸುಮಾ ಮೋಂಟಡ್ಕ,ಕೋಮಲಾ ಕೇರ್ಪಳ, ಪೂಜಾ ಸೇರ್ಕಜೆ, ಶಿವಪ್ರಸಾದ್ ಆಲೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.