ನಾಗಪಟ್ಟಣ ಸದಾಶಿವ ದೇವಸ್ಥಾನ ಪ್ರತಿಷ್ಠಾ ವಾರ್ಷಿಕೋತ್ಸವದ ಆಮಂತ್ರಣ ಪತ್ರ ಬಿಡುಗಡೆ

0

ನಾಗಪಟ್ಟಣ ಶ್ರೀ ಸದಾಶಿವ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ ಮಾ.12 ರಿಂದ 14 ರ ತನಕ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆಯನ್ನು ಮಾ. 3 ರಂದು ದೇವಸ್ಥಾನದಲ್ಲಿ ಬಿಡುಗಡೆ ಮಾಡಲಾಯಿತು.
ದೇವಸ್ಥಾನದ ಪ್ರಧಾನ ಅರ್ಚಕರು ಪೂಜೆ ನೆರವೇರಿಸಿ ಪ್ರಾರ್ಥಿಸಿ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದಿನೇಶ್ ಕೊಲ್ಚಾರ್, ಅರ್ಚಕ ಶಿವಪ್ರಸಾದ್ ನಾಗಪಟ್ಟಣ, ಸದಸ್ಯರಾದ ಸುಧಾಮ ಆಲೆಟ್ಟಿ, ಬಾಬುಗೌಡ ಕಡೆಂಗ, ಶ್ರೀಮತಿವಿಜಯಕುಮಾರಿ, ಕೃಷ್ಣಪ್ಪಗೌಡ ನಾಗಪಟ್ಟಣ, ತಂಗವೇಲು ನಾಗಪಟ್ಟಣ, ಆನಂದ ಗೌಡ ನಾಗಪಟ್ಟಣ, ಪಂಚಾಯತ್ ಸದಸ್ಯೆ ಶ್ರೀಮತಿ ಕಮಲ ನಾಗಪಟ್ಟಣ,ಅರ್ಚಕ ದಿವಿಜೇಶ್, ದೇವಸ್ಥಾನದ ಸಿಬ್ಬಂದಿ ಶರತ್ ಗುಡ್ಡೆಮನೆ, ರಾಮಸುಂದರ್ ನಾಗಪಟ್ಟಣ ಹಾಗೂ ಸ್ಥಳೀಯರು ಉಪಸ್ಥಿತ ರಿದ್ದರು.