ಅರಂತೋಡು : ನೇಣು ಬಿಗಿದು ಆತ್ಮಹತ್ಯೆ

0

ಅರಂತೋಡು ಗ್ರಾಮದ ಕಲ್ಲುಗುಡ್ಡೆ ಮನೆ ಪದ್ಮಯ್ಯ ಕೆ. (47 ವರ್ಷ) ಎಂಬುವವರು ತನ್ನ ತೋಟದ ಕೊಕ್ಕೋ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಪದ್ಮಯ್ಯ ರವರು ನಿನ್ನೆ ಬೆಳಿಗ್ಗೆ 7 ಗಂಟೆಗೆ ತೋಟದಲ್ಲಿ ನೀರು ಹಾಯಿಸುವ ಪೈಪಿನ ಜೆಟ್ ಸರಿ ಮಾಡಿ ಬರುತ್ತೇನೆ ಎಂದು ಹೇಳಿ ಹೋದವರು ಮತ್ತೆ ಮನೆಗೆ ಹಿಂದಿರುಗಲಿಲ್ಲ.


ಮನೆಯವರು ಸುಮಾರು ಹುಡುಕಾಟ ನಡೆಸಿ ಇಂದು ಮಧ್ಯಾಹ್ನ ಪದ್ಮಯ್ಯ ರವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದೆ.
ಘಟನೆ ತಿಳಿದ ಸುಳ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.