ಬಡ್ಡಡ್ಕ ಅಮರ ಕ್ರೀಡಾ ಮತ್ತು ಕಲಾ ಸಂಘದ ವತಿಯಿಂದ ಸತ್ಯನಾರಾಯಣ ಪೂಜೆ ಮತ್ತು ಕುಣಿತ ಭಜನೆ

0

ಆಲೆಟ್ಟಿ ಗ್ರಾಮದ ಬಡ್ಡಡ್ಕ ಅಮರ ಕ್ರೀಡಾ ಮತ್ತು ಕಲಾ ಸಂಘ ದ ಆಶ್ರಯದಲ್ಲಿ 22 ನೇ ವರ್ಷದ ಸಾಮೂಹಿಕ ಸತ್ಯನಾರಾಯಣ ದೇವರ ಪೂಜೆಯು ಮಾ.7 ರಂದು ಬಡ್ಡಡ್ಕ ಶ್ರೀ ಅಯ್ಯಪ್ಪ ಭಜನಾ ಮಂದಿರದ ವಠಾರದಲ್ಲಿ ಜರುಗಿತು.
ಬೆಳಗ್ಗೆ ಪುರೋಹಿತರ ನೇತೃತ್ವದಲ್ಲಿ ಗಣಪತಿ ಹವನವಾಗಿ ಸಾಮೂಹಿಕ ಸತ್ಯನಾರಾಯಣ ದೇವರ ಪೂಜೆಯು ಆರಂಭಗೊಂಡಿತು. ಮಧ್ಯಾಹ್ನ ಮಹಾಪೂಜೆಯಾಗಿ ಪ್ರಸಾದ ವಿತರಣೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.

ಸಂಜೆ ಕಡಬದ ನಾಕೂರುಗಯದ ಪುಳಿಕುಕ್ಕು ಶ್ರೀ ಗೋಪಾಲಕೃಷ್ಣ ಮಹಿಳಾ ಮತ್ತು ಮಕ್ಕಳ ಕುಣಿತ ಭಜನಾ ತಂಡದವರಿಂದ
ಆಕರ್ಷಕ ಕುಣಿತ ಭಜನೆಯು ನಡೆಯಿತು. ಸ್ಥಳೀಯ ಭಕ್ತಾದಿಗಳು ಸೇವಾ ರೂಪದಲ್ಲಿ ಪೂಜೆಯನ್ನು ಮಾಡಿಸಿದರು. ಸಂಘದ ಮಾಜಿ ಅಧ್ಯಕ್ಷ ದೇವಿಪ್ರಸಾದ್ ಬಡ್ಡಡ್ಕ ಸ್ವಾಗತಿಸಿದರು. ಸನತ್ ಬಡ್ಡಡ್ಕ ವಂದಿಸಿದರು.
ಸಂಘದ ಅಧ್ಯಕ್ಷ ವೆಂಕಟ್ರಮಣ
ದೋಣಿಮೂಲೆ, ಗೌರವಾಧ್ಯಕ್ಷ ಡಾ.ಎನ್.ಎ.ಜಯದೀಪ್,ಕಾರ್ಯದರ್ಶಿ ರಂಜಿತ್ ಬಿ.ಎಸ್, ಖಜಾಂಜಿ ಸುದೀಪ್ ಆಡಿಂಜ ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರು ಸಹಕರಿಸಿದರು.