ಸುಬ್ರಹ್ಮಣ್ಯ ಕುಕ್ಕೆ ಶ್ರೀ ಜೆಸಿಯ ಪದಗ್ರಹಣ ಸಮಾರಂಭ

0

ಅಧ್ಯಕ್ಷ : ಯೋಗನಾಥ್, ಕಾರ್ಯದರ್ಶಿ: ಡಾlರಾಜೇಶ್ವರಿ

ಜೆಸಿಐ ಕುಕ್ಕೆ ಶ್ರೀ ಪದಗ್ರಹಣ ಸಮಾರಂಭವು ಮಾ.11.ರಂದು ಕುಮಾರಸ್ವಾಮಿ ವಿದ್ಯಾಲಯದಲ್ಲಿ ಜರಗಿತು. ನಿಕಟಪೂರ್ವ ಅಧ್ಯಕ್ಷ ದೀಪಕ್ ನಂಬಿಯಾರ್ ಅವರು 2023 ನೇ ಸಾಲಿನ ನೂತನ ಅಧ್ಯಕ್ಷರಾದ ಯೋಗನಾಥ್ ಅವರಿಗೆ ದಂಡ ಮಾಲೆ ಮಾಲೆ ಕಾಲರ್ ಹಾಗೂ ಹೂಗುಚ್ಛವನ್ನ ನೀಡಿ ಅಧಿಕಾರ ಹಸ್ತಾಂತರಿಸಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರೋ ಲI ಕೆ. ಆರ್. ಶೆಟ್ಟಿಗಾರ್, ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ಗೋಪಾಲ್ ಎಣ್ಣೆ ಮಜಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜೆ ಸಿ ಐ ವಲಯ 15ರ ಉಪಾಧ್ಯಕ್ಷ ಜೆಸಿ ದೇವರಾಜ್ ಕುದ್ಪಾಜೆ ನೂತನ ಪದಾಧಿಕಾರಿಗಳು ಹಾಗೂ ನೂತನ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು.

ಇದೇ ಸಂದರ್ಭದಲ್ಲಿ ಜೆಸಿಐ ಸುಬ್ರಹ್ಮಣ್ಯ ಕುಕ್ಕೆ ಶ್ರೀ ಯ ಸ್ಥಾಪಕ ಅಧ್ಯಕ್ಷ ವಿಶ್ವನಾಥ ನಡುತೋಟ, ಕೆ.ಎಸ್. ಆರ್.ಟಿ. ಸಿ ಯಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ದೇವರಾಜ್ ಕೆದಿಲ, ಭೂಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಹೊನ್ನಪ್ಪ ಬಾನಡ್ಕ, ಸಮಾಜ ಸೇವೆ ಸಲ್ಲಿಸುತ್ತಿರುವ ಸುಬ್ರಹ್ಮಣ್ಯದ ಉದ್ಯಮಿ ಹರೀಶ್ ಕಾಮತ್ ಅವರುಗಳನ್ನು ಗೌರವಿಸಲಾಯಿತು. ಜೆ ಸಿ ಐ ಭಾರತದ ಪೂರ್ವ ನಿರ್ದೇಶಕರಾದ ಜಿಸಿ ಚಂದ್ರಶೇಖರ್ ನಾಯರ್, ಜೆ ಸಿ ಐ ಭಾರತದ ಪೂರ್ವ ಸಂಯೋಜಕರಾದ ಜೆ ಸಿ ಡಾI ರವಿ ಕಕ್ಕೆ ಪದವು, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಸುಬ್ರಹ್ಮಣ್ಯ ಕುಕ್ಕೆ ಶ್ರೀ ಜೆಸಿಐ ನ ಪೂರ್ವ ಅಧ್ಯಕ್ಷರುಗಳಾದ ವಿಮಲ ರಂಗಯ್ಯ, ಪ್ರಭಾಕರ ಪಡ್ರೆ, ಮೋಹನ್ದಾಸ್ ರೈ, ಸುದೀಪ್ ಕುಮಾರ್ ಬೋಳಾರ್, ರೇಷ್ಮಾ ಪ್ರಕಾಶ್, ಭಾರತಿ ದಿನೇಶ್, ಪ್ರಕಾಶ್ ಕಟ್ಟೆಮನೆ, ನಿಕಟಪೋರ್ವ ಕಾರ್ಯದರ್ಶಿ ಚಂದ್ರಕಲಾ, ಸುಬ್ರಹ್ಮಣ್ಯ ಕುಕ್ಕೆ ಶ್ರೀ ಜೆ ಸಿ ಐ ನ ಕೋಶಾಧಿಕಾರಿ ಚಂದ್ರಶೇಖರ್, ಇನ್ನರ್ವಿಲ್ ಪೂರ್ವ ಅಧ್ಯಕ್ಷ ಲೀಲಾಕುಮಾರಿ ಟಿ, ಶ್ರೀಮತಿ ಸುದೀಪ್ ಕುಮಾರ್ ಬೋಳಾರ್, ಜೆ ಸಿ ವಲಯ15 ರ ಕಾರ್ಯದರ್ಶಿ ಕರುಣಾಕರ ಗೋಗಟೆ, ಶ್ರೀಮತಿ ಕುಮಾರ್ ನಾಯರ್, ನಿವೃತ್ತ ಯೋಧ ವಾಸುದೇವ ಬಾನಡ್ಕ, ಮಣಿಕಂಠ ಸುಬ್ರಹ್ಮಣ್ಯ, ಲೊಕೇಶ್ ಪೀರನಮನೆ, ಕುಮಾರ್ ಶೆಟ್ಟಿ, ಕುಮಾರಸ್ವಾಮಿ ವಿದ್ಯಾಲಯದ ಶಿಕ್ಷಕ ವೃಂದ, ಜೆಸಿ ಅಭಿಮಾನಿಗಳು, ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ಕುಕ್ಕೆ ಶ್ರೀ ಜೆಸಿಐ ನೂತನ ಕಾರ್ಯದರ್ಶಿ ಡಾI ರಾಜೇಶ್ವರಿ ವಂದಿಸಿದರು.