ಪಡ್ಪಿನಂಗಡಿ: ಮಾಜಿ ಯೋಧ ದಿ.
ಶಿವರಾಮ ಗೌಡ ಪಂಬೆತ್ತಾಡಿಯವರಿಗೆ ಶ್ರದ್ಧಾಂಜಲಿ

0

ಭಾರತೀಯ ಭೂಸೇನೆಯಲ್ಲಿ 22 ವರುಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಶಿವರಾಮ ಗೌಡ ಪಂಬೆತ್ತಾಡಿ ಯವರು
ಮಾ.2.ರಂದು ನಿಧನರಾಗಿದ್ದು, ಅವರಿಗೆ ಶ್ರದ್ಧಾಂಜಲಿ- ನುಡಿನಮನ ಕಾರ್ಯಕ್ರಮ ಮಾ.18 ರಂದು ಪಡ್ಪಿನಂಗಡಿ ನಡ್ಕ ಶಿವಗೌರಿ ಕಲಾಮಂದಿರದಲ್ಲಿ ಜರುಗಿತು.
. ಭಾರತೀಯ ಸೇನಾಪಡೆಯ ಮಾಜಿ ಯೋಧ, ಮಂಗಳೂರು ಯೂನಿಯನ್ ಬ್ಯಾಂಕ್ ಸಿಬ್ಬಂದಿ ಸೋಮಶೇಖರ,
ಭಾರತೀಯ ಸೇನಾಪಡೆಯ ಮಾಜಿ ಯೋಧ,ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಮಾಧವ ಬಿ ಕೆ ರವರು ನುಡಿನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ
ಮೃತರ ಪತ್ನಿ ಶ್ರೀಮತಿ ದುರ್ಗಾಕಲಾ ಪಂಬೆತ್ತಾಡಿ, ಪುತ್ರರಾದ ಲಿಖಿತ್ ಪಂಬೆತ್ತಾಡಿ ,ಲಿಖಿನ್ ಪಂಬೆತ್ತಾಡಿ ,
ಕುಟುಂಬಸ್ಥರು, ನೆಂಟರಿಷ್ಟರು, ಬಂಧುಮಿತ್ರರು,ಮಾಜಿ ಯೋಧರು,
ಪಾಲ್ಗೊಂಡಿದ್ದು, ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.