ಕಳಂಜ-ಬಾಳಿಲ ಸಹಕಾರಿ ಸಂಘದ ಕಾನೂನು ಸಲಹೆಗಾರರಾಗಿ ನ್ಯಾಯವಾದಿ ದೇವಿಪ್ರಸಾದ್ ಆಳ್ವ ನೇಮಕ

0

ಕಳಂಜ-ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಾನೂನು ಸಲಹೆಗಾರರಾಗಿ ಸುಳ್ಯದ ನ್ಯಾಯವಾದಿ ದೇವಿಪ್ರಸಾದ್ ಆಳ್ವ ಇವರು ನೇಮಕಗೊಂಡಿದ್ದಾರೆ.

ಸುಳ್ಯ ಮತ್ತು ಬೆಳ್ಳಾರೆಯಲ್ಲಿ ನ್ಯಾಯವಾದಿ ಕಚೇರಿಯನ್ನು ಹೊಂದಿರುವ ದೇವಿಪ್ರಸಾದ್ಆಳ್ವರು ನೋಟರಿಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಬ್ಯಾಂಕ್ ಆಫ್ ಬರೋಡಾ, ಯೂನಿಯಾನ್ ಬ್ಯಾಂಕ್, ಕರ್ನಾಟಕ ರಸ್ತೆ ಸಾರಿಗೆ ನಿಗಮ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘ, ಶ್ರೀ ಸರಸ್ವತಿ ಕ್ರೆಡಿಟ್ ಸೌಹರ್ದ ಸಹಕಾರಿ ಸಂಘ, ಮಾತೃಭೂಮಿ ಸೌಹಾರ್ದ ಸಹಕಾರಿ ಸಂಘ, ರೆಸ್ಕೋ ಬ್ಯಾಂಕ್, ಕನಕಮಜಲು ಮತ್ತು ಬೆಳ್ಳಾರೆ ಸಹಕಾರಿ ಸಂಘ ಇವುಗಳ ಕಾನೂನು ಸಲಹೆಗಾರರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.