ಲಯನ್ಸ್ ಜಿಲ್ಲಾ ರಾಜ್ಯಪಾಲರಾದ ಲಯನ್ ಸಂಜೀತ್ ಶೆಟ್ಟಿ ಠಿmರಿಜಿರವರು ಸಂಪಾಜೆ ಲಯನ್ಸ್ ಕ್ಲಬ್ಬಿಗೆ ಭೇಟಿ ಮಾ. ೧೧ರಂದು ನೀಡಿ, ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಾಮಾಜಿಕ ಸೇವೆ ಕಾರ್ಯಕ್ರಮದಡಿಯಲ್ಲಿ, ಸಂಪಾಜೆ ಗ್ರಾಮದ ದೊಡ್ಡಡ್ಕ ಕೊರಗಜ್ಜ ದೇವಸ್ಥಾನದ ಬಳಿ ನಿರ್ಮಿಸಿದ ಬಸ್ ಪ್ರಯಾಣಿಕರ ತಂಗುದಾಣ ಉದ್ಘಾಟನೆ, ಸಂಪಾಜೆ ಜೂನಿಯರ್ ಕಾಲೇಜಿನಲ್ಲಿ ನಿರ್ಮಿಸಿದ ಶೌಚಾಲಯದ ಉದ್ಘಾಟನೆ, ಎಂ.ಬಿ.ಫೌಂಡೇಶೆನ್ ನಡೆಸುತ್ತಿರುವ ಸಾಂದೀಪ್ ವಿಶೇಷ ಶಾಲೆಗೆ 65,೦೦೦ ರೂಪಾಯಿಗಳ ಆರ್ಥಿಕ ನೆರವು ನೀಡಿದರು. ಹಾಗೂ ದ.ಕ ಸಂಪಾಜೆ ಗ್ರಾಮದ ೪ ಜನ ಆಶಾಕಾರ್ಯಕರ್ತೆಯರನ್ನು ಅಭಿನಂದಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು, ಸಂಪಾಜೆ ಕ್ಲಬಿನ ಅಧ್ಯಕ್ಷೆ ನಳಿನಿ ಕಿಶೋರ್ ವಹಿಸಿದ್ದು, ವೇದಿಕೆಯಲ್ಲಿ ಜಿಲ್ಲಾ ಪ್ರಥಮ ಮಹಿಳೆ ಪ್ರಗತಿ ಎಸ್ ಶೆಟ್ಟಿ, ಜಿಲ್ಲಾ ಎರಡನೇ ಉಪರಾಜ್ಯಪಾಲರಾದ ಭಾರತಿ ಬಿ.ಎಂ, ಪ್ರಾಂತೀಯ ಅಧ್ಯಕ್ಷರಾದ ಸಂಧ್ಯಾ ಸಚಿತ್ ರೈ, ವಲಯಾಧ್ಯಕ್ಷರಾದ ಗಂಗಾಧರ ರೈ, ಕ್ಲಬಿನ ಕಾರ್ಯದರ್ಶಿ ಅಮೃತಾ ಅಪ್ಪಣ್ಣ ಹಾಗೂ ಕೋಶಾಧಿಕಾರಿ ಗಿರೀಶ್ ಕೆ ವಿ ಉಪಸ್ಥಿತರಿದ್ದರು.