ಸತೀಶ್ ಚಿಲ್ಪಾರು ನಿಧನ

0


ಅಮರಮುಡ್ನೂರು ಗ್ರಾಮದ ದಿ. ವೆಂಕಟ್ರಮಣ ಗೌಡರ ಪುತ್ರ ಸತೀಶ್ ಚಿಲ್ಪಾರು ತೀವ್ರ ಅಸೌಖ್ಯದಿಂದ ಇಂದು ಮುಂಜಾನೆ ನಿಧನರಾದರು. ಅವರಿಗೆ ೪೪ ವರ್ಷ ವಯಸ್ಸಾಗಿತ್ತು.
ರಕ್ತದೊತ್ತಡದ ತೀವ್ರ ಕುಸಿತ ಉಂಟಾಗಿ ಮಾ. ೧೮ರಂದು ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ಕೊನೆಯುಸಿರೆಳೆದರು.
ಮೃತರು ಪತ್ನಿ, ಇಬ್ಬರು ಪುತ್ರರು, ತಾಯಿ, ಇಬ್ಬರು ಸಹೋದರರು, ಹಾಗೂ ಓರ್ವ ಸಹೋದರಿಯನ್ನು ಅಗಲಿದ್ದಾರೆ.