ಗಾಂಧಿನಗರ ಜುಮಾ ಮಸ್ಜಿದ್ ಆಶ್ರಯದಲ್ಲಿ ಸುಸಜ್ಜಿತ ಮಯ್ಯಿತ್ ಪರಿಪಾಲನಾ ಕಟ್ಟಡ ಲೋಕಾರ್ಪಣೆ ಮತ್ತು ಪರಿಪಾಲನೆ ಕಾರ್ಯಾಗಾರ

0

ಸುಳ್ಯ ಗಾಂಧಿನಗರ ಮುಹಿಯದ್ದೀನ್ ಜುಮಾ ಮಸ್ಜಿದ್ ಇದರ ಆಶ್ರಯದಲ್ಲಿ ಅಲ್ ಇಖ್ವಾನ್ ಮಯ್ಯಿತ್ ಪರಿಪಾಲನಾ ಸಮಿತಿ ಸಹಭಾಗಿತ್ವದಲ್ಲಿ
ದಾನಿಗಳ ಸಹಕಾರದೊಂದಿಗೆ
ಗಾಂಧಿನಗರ ಜುಮಾ ಮಸೀದಿ ವಠಾರದಲ್ಲಿ
ನೂತನವಾಗಿ ನಿರ್ಮಿಸಿದ ಸುಸಜ್ಜಿತ ಮಯ್ಯಿತ್ ಪರಿಪಾಲನಾ ಕಟ್ಟಡದ ಲೋಕಾರ್ಪಣೆ ಮತ್ತು ಮಯ್ಯಿತ್ ಪರಿಪಾಲನ ಕಾರ್ಯಗಾರ ಮಾರ್ಚ್ 19ರಂದು ಗಾಂಧಿನಗರ ಮಸೀದಿ ವಠಾರದಲ್ಲಿ ನಡೆಯಿತು.

ಜಮಾಲ್ ಸಕಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಮಯ್ಯಿತ್ ಪರಿಪಾಲನಾ ಕಟ್ಟಡವನ್ನು ಸುಳ್ಯ ತಾಲೂಕು ಜಮೀಯತುಲ್ ಉಲಮಾ ಅಧ್ಯಕ್ಷ ಅಸ್ಸಯ್ಯಿದ್ ಕುಂಞಿಕೋಯ ತಂಙಳ್ ಲೋಕಾರ್ಪಣೆ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಾಂಧಿನಗರ ಜುಮ್ಮಾ ಮಸ್ಜಿದ್ ಅಧ್ಯಕ್ಷ ಕೆ. ಎಂ. ಮುಸ್ತಫ ವಹಿಸಿದ್ದರು.
ಮೊಗರ್ಪಣೆ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಜಿ ಇಬ್ರಾಹಿಂ ಸೀಫುಡ್ ನಾಮಫಲಕ ಅನಾವರಣ ಗೊಳಿಸಿದರು.


ಗಾಂಧಿನಗರ ಮಸ್ಜಿದ್ ಖತೀಬರಾದ ಅಲ್ ಹಾಜ್ ಅಶ್ರಫ್ ಕಾಮಿಲ್ ಸಖಾಫಿ ದುವಾ ನೆರವೇರಿಸಿದರು.
ನಿಕಟಪೂರ್ವ ಮುದರ್ರಿಸರಾದ ಶರಫುದ್ದೀನ್ ಸಅದಿ ಕಾರ್ಯಕ್ರಮವನ್ನು ಶ್ಲಾಘಿಸಿ ಮಾತನಾಡಿದರು.


ವೇದಿಕೆಯಲ್ಲಿ ಪೇರಡ್ಕ ಜುಮ್ಮಾಮಸೀದಿ ಗೌರವಾಧ್ಯಕ್ಷ ಟಿ.ಎಂ. ಶಹೀದ್, ಎಐಕೆಎಂಸಿಸಿ
ಜಿಲ್ಲಾ ಖಜಾಂಜಿ ಕತ್ತರ್ ಇಬ್ರಾಹಿo ಹಾಜಿ ಮಂಡೆಕೋಲು,ಪೆರಾಜೆ ಜಮಾ ಮಸೀದಿ ಅಧ್ಯಕ್ಷ ಶಹೀದ್ ಕಲ್ಚರ್ಪೆ, ಅಂಬಟಡ್ಕ ಇಖ್ರಾ ಜಾಮಿಯ ಮಸ್ಜಿದ್ ಅಧ್ಯಕ್ಷ ಅಬ್ದುಲ್ ಜಲೀಲ್,ಜಟ್ಟಿಪ್ಪಳ್ಳ ಬುಸ್ತಾನುಲ್ ಉಲೂo ಕಮಿಟಿ ಅಧ್ಯಕ್ಷ ಹಾಜಿ ಮಹಮ್ಮದ್ ಎಸ್ಎಎಸ್,ಕುಂಭಕ್ಕೋಡ್ ಜುಮ್ಮಾ ಮಸ್ಜಿದ್ ಅಧ್ಯಕ್ಷ ಇಸ್ಮಾಯಿಲ್ ಸಅದಿ ಜಮಾಅತ್ ಕಮಿಟಿ ಮಾಜಿ ಅಧ್ಯಕ್ಷರುಗಳಾದ ಹಾಜಿ ಆದo ಕಮ್ಮಾಡಿ,ಹಾಜಿ ಕೆ. ಬಿ. ಮಹಮ್ಮದ್, ಪ್ರಧಾನ ಕಾರ್ಯದರ್ಶಿ ಕೆ. ಬಿ. ಅಬ್ದುಲ್ ಮಜೀದ್, ಉಪಾಧ್ಯಕ್ಷ ಹಾಜಿ ಮಹಮ್ಮದ್ ಕೆಎಂಎಸ್, ಖಜಾಂಚಿ ಮುಹಿಯದ್ದೀನ್ ಫ್ಯಾನ್ಸಿ, ನಿರ್ದೇಶಕರುಗಳಾದ ಹಾಜಿ ಎಸ್.ಎ.ಹಮೀದ್, ಕೆ.ಎಸ್.ಉಮ್ಮರ್,ಹಮೀದ್ ಬೀಜಕೊಚ್ಚಿ,ಜಿ.ಎಂ.ಇಬ್ರಾಹಿಂ ಶಿಲ್ಪಾ,ಇಸ್ಮಾಯಿಲ್ ಹಾಜಿ, ಅಲ್ಇಖ್ವಾನ್ ಕಮಿಟಿ ಸಂಚಾಲಕರ ಖಾದರ್ ಜಟ್ಟಿಪ್ಪಳ್ಳ, ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ ಮೊದಲಾದವವರು ಉಪಸ್ಥಿತರಿದ್ದರು.
ಸ್ಥಳೀಯ ಮದರಸ ಮೊಅಲ್ಲಿಮರಾದ ಅಬ್ದುಲ್ ಲತೀಫ್ ಸಖಾಫಿ ಸ್ವಾಗತಿಸಿ ವಂದಿಸಿದರು.