ಕೆರೆಮೂಲೆ ವಾರ್ಡಿನಲ್ಲಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣೆ

0


ಸುಳ್ಯ ವಿಧಾನಸಭಾ ಕ್ಷೇತ್ರದ ಸುಳ್ಯ ನಗರದ ಕೆರೆಮೂಲೆ ವಾರ್ಡಿನಲ್ಲಿ ವಾರ್ಡ್ ಸದಸ್ಯ ಎಂ ವೆಂಕಪ್ಪ ಗೌಡರ ನೇತೃತ್ವದಲ್ಲಿ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಬಿಡುಗಡೆಗೊಳಿಸಿರುವ ಗ್ಯಾರಂಟಿ ಪತ್ರವನ್ನು ವಿತರಿಸುವ ಕಾರ್ಯಕ್ರಮ ಮಾರ್ಚ್ 20ರಂದು ನಡೆಯಿತು.


ಈ ಸಂದರ್ಭದಲ್ಲಿ ವಾರ್ಡಿನ ಮನೆ ಮನೆಗಳಿಗೆ ತೆರಳಿ ಗ್ಯಾರಂಟಿ ಕಾರ್ಡನ್ನು ಮನೆಯ ಸದಸ್ಯರಿಗೆ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ ವೆಂಕಪ್ಪ ಗೌಡರು ನೀಡಿದರು. ಈ ಸಂದರ್ಭದಲ್ಲಿ ರಾಜ್ಯ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ಕೆ ಎಂ ಮುಸ್ತಫ ಜನತಾ,ನ ಪಂ ಮಾಜಿ ಸದಸ್ಯ ಗೋಕುಲ್ ದಾಸ್,ನ ಪಂ ಸದಸ್ಯ ಡೇವಿಡ್ ಧೀರಕ್ರಾಸ್ತಾ, ಪಕ್ಷದ ವಾರ್ಡಿನ ಮುಖಂಡರುಗಳಾದ ನೌಶಾದ್ ಬಾರ್ಪಣೆ ,ಶಾಯಿದ್ ಗುರುಂಪು, ರಾಜು ಪಂಡಿತ್ , ಸುಳ್ಯ ವಿಧಾನಸಭಾ ಕ್ಷೇತ್ರದ ಇಂಟೆಕ್ ಅಧ್ಯಕ್ಷ ಶಾಫಿ ಕುತ್ತಮೊಟ್ಟೆ, ಸ್ಥಳೀಯರಾದ ಅಬ್ದುಲ್ ಕಯ್ಯುಮ್, ಅಬ್ದುಲ್ ರಹಿಮಾನ್,ರಬೀಜ್ ಮೊದಲಾದವರು ಉಪಸ್ಥಿತರಿದ್ದರು.