ಕೆ.ಎಸ್ ಗೌಡ ಸಮೂಹ ವಿದ್ಯಾ ಸಂಸ್ಥೆಗಳ ವಸತಿ ನಿಲಯ ಸಲಹಾ ಸಮಿತಿ ರಚನೆ

0


ಗೌರವಾಧ್ಯಕ್ಷರಾಗಿ ಅಶೋಕ್ ಕುಮಾರ್ ಕೆ ಎಸ್, ಅಧ್ಯಕ್ಷರಾಗಿ ಬಾಲಕೃಷ್ಣ ರೈ ಪಾದೆಕಲ್ಲು, ನಿರ್ದೇಶಕರಾಗಿ ಕುಮಾರ ಸ್ವಾಮಿ ಕೆ ಎಸ್
.

ಕೆ.ಎಸ್ ಗೌಡ ಸಮೂಹ ವಿದ್ಯಾ ಸಂಸ್ಥೆಗಳು, ವರ್ಷ ನಗರ ನಿಂತಿಕಲ್ಲು ಇದರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆ.ಎಸ್ ಗೌಡ ವಸತಿ ನಿಲಯಕ್ಕೆ ನೂತನ ವಸತಿ ನಿಲಯ ಸಲಹಾ ಸಮಿತಿಯನ್ನು ರಚಿಸಲಾಯಿತು.


ಸಮಿತಿಯ ಅಧ್ಯಕ್ಷರಾಗಿ ಬಾಲಕೃಷ್ಣ ರೈ ಪಾದೆಕಲ್ಲು ಮತ್ತು ನಿರ್ದೇಶಕರಾಗಿ ಕುಮಾರಸ್ವಾಮಿ ಕೆ.ಎಸ್ ಪದಗ್ರಹಣ ಮಾಡಿದರು. ವಿದ್ಯಾ ಸಂಸ್ಥೆಗಳ ಅಧ್ಯಕ್ಷರಾದ ಅಶೋಕ್ ಕುಮಾರ್ ಕೆ.ಎಸ್ ಗೌರವಾಧ್ಯಕ್ಷರಾಗಿ ಹಾಗೂ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸದಾನಂದ ರೈ ಕೂವೆಂಜ ಕಾರ್ಯದರ್ಶಿಯಾಗಿ, ವಸತಿ ನಿಲಯದ ನಿರ್ವಹಣಾ ಜವಾಬ್ದಾರಿಯನ್ನು ವಹಿಸಿರುವ ರಕ್ಷಿತ್ ರೈಯವರು ಜೊತೆ ಕಾರ್ಯದರ್ಶಿ, ಪರಿವಾರ ಪಂಚಲಿಂಗೇಶ್ವರ ಐ.ಟಿ.ಐ ಯ ಪ್ರಾಚಾರ್ಯರಾದ ಸುಧೀರ್ ಎಂ.ವಿ, ಕೆ.ಎಸ್ ಗೌಡ ಪದವಿ ಪೂರ್ವ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕರಾದ ಉಜ್ವಲ್
ಕೆ.ಎಚ್, ಕೆ.ಎಸ್ ಗೌಡ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮುಖ್ಯ ಶಿಕ್ಷಕರಾದ ಉಮೇಶ್ ಗೌಡ ಎಚ್ ಸದಸ್ಯರಾಗಿ ಆಯ್ಕೆಯಾದರು.


ಮುಂದಿನ ಶೈಕ್ಷಣಿಕ ವರ್ಷದಿಂದ ಸುಸಜ್ಜಿತ ವಸತಿ ನಿಲಯವನ್ನು ಹೊಸ ಸಮಿತಿಯ ಮೂಲಕ ನಿರ್ವಹಿಸಲಾಗುವುದು ಎಂದು ಅಧ್ಯಕ್ಷರಾದ ಅಶೋಕ್ ಕುಮಾರ್ ಕೆ.ಎಸ್ ತಿಳಿಸಿದರು. ವಸತಿ ನಿಲಯದಲ್ಲಿ ಪದವಿ ಪೂರ್ವ ವಿಭಾಗದ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ, ಐ.ಟಿ.ಐ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಅವಕಾಶ ಇರುತ್ತದೆ ಎಂದು ಅಧ್ಯಕ್ಷರು ತಿಳಿಸಿದರು.