ಕು. ನಿಧಿ ಕೆ. ಭರತ ನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ

0

ಬಳ್ಪ ಗ್ರಾಮದ ಕಟ್ಟ ಕು. ನಿಧಿ.ಕೆ ಯವರು 2022-23ನೇ ಸಾಲಿನ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿರುತ್ತಾರೆ.
ವಿಶ್ವಕಲಾನಿಕೇತನ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್ & ಕಲ್ಚರ್ ಪುತ್ತೂರು ಇದರ ಪಂಜ ಶಾಖೆಯ ವಿದ್ಯಾರ್ಥಿನಿಯಾಗಿರುವ ಕು. ನಿಧಿ ಕೆ.ಯವರು ಕರ್ನಾಟಕ ಕಲಾಶ್ರೀ ವಿದುಷಿ ನಯನ ಪಿ. ರೈ ಮತ್ತು ವಿದುಷಿ ಸ್ವಸ್ತಿಕಾ ಆರ್. ಶೆಟ್ಟಿಯವರ ಶಿಷ್ಯೆ ಬಳ್ಪ ಗ್ರಾಮದ ಕಟ್ಟ ಲೋಕೇಶ್ವರ ಕೆ ಮತ್ತು ಶ್ರೀಮತಿ ‌ಭವಾನಿ ಕೆ ದಂಪತಿಗಳ ಪುತ್ರಿ.