ಕುಕ್ಕಟ್ಟೆ ದೇವಸ್ಥಾನದಲ್ಲಿ ಯುಗಾದಿ ಪೂಜಾ ಮಹೋತ್ಸವ

0

ಮುರುಳ್ಯ ಗ್ರಾಮದ ಕುಕ್ಕಟ್ಟೆ ಶ್ರೀ ಕಾಳಿಕಾಪರಮೇಶ್ವರಿ ಭದ್ರಕಾಳಿ ದೇವಸ್ಥಾನದಲ್ಲಿ ಮಾ. 26ರಂದು ಕ್ಷೇತ್ರದ ತಂತ್ರಿಗಳ ಮಾರ್ಗದರ್ಶನದಲ್ಲಿ ಪುರೋಹಿತ ಬಾಲಕೃಷ್ಣ ಆಚಾರ್ಯರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮಗಳೊಂದಿಗೆ ಯುಗಾದಿ ಪೂಜಾ ಮಹೋತ್ಸವ ಕಾರ್ಯಕ್ರಮ ನಡೆಯಿತು.


ಪುರೋಹಿತರುಗಳಾದ ಪ್ರವೀಣ್, ಸತ್ಯಪ್ರಸಾದ್, ಸುಪ್ರಸನ್ನ, ಈಶ್ವರ ಆಚಾರ್ಯ, ಪುರುಷೋತ್ತಮ ಆಚಾರ್ಯ, ಸೀತಾರಾಮ ಆಚಾರ್ಯ, ಉಮೇಶ್ ಆಚಾರ್ಯ ಸಹಕರಿಸಿದರು.
ಈ ಸಂದರ್ಭದಲ್ಲಿ ಆಡಳಿತ ಸಮಿತಿಯ ಅಧ್ಯಕ್ಷ ಧನಂಜಯ ಆಚಾರ್ಯ ಮತ್ತು ಸದಸ್ಯರು, ಜೀರ್ಣೋದ್ಧಾರ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳು, ಅಲ್ಲದೆ ಪ್ರಮುಖರಾದ ಸೋಮಪ್ಪ ಗೌಡ, ಶೇಖರ ಸಾಲಿಯನ್, ಮಧುಚಂದ್ರ ಪಂಜ, ಲಿಗೋಧರ ಆಚಾರ್ಯ, ಭಾಸ್ಕರ ಪಂಜ, ಊರಿನವರು ಉಪಸ್ಥಿತರಿದ್ದರು
.