ಶ್ರೀಧರ ಗೌಡ ಕೊಪ್ಪತ್ತಡ್ಕರವರಿಗೆ ಶ್ರದ್ಧಾಂಜಲಿ ,ವೈಕುಂಠ ಸಮಾರಾಧನೆ

0

ಐವರ್ನಾಡು ಗ್ರಾಮದ ಕೊಪ್ಪತ್ತಡ್ಕ ನಿವಾಸಿ ಶ್ರೀಧರ ಗೌಡರು ಮಾ. 20 ರಂದು ನಿಧನರಾಗಿದ್ದು ಅವರಿಗೆ ಶ್ರದ್ಧಾಂಜಲಿ ಮತ್ತು ವೈಕುಂಠ ಸಮಾರಾಧನೆಯು ಎ.5 ರಂದು ಕೊಪ್ಪತ್ತಡ್ಕ ಮನೆಯಲ್ಲಿ ನಡೆಯಿತು.


ಶಿವರಾಮ ಕೆದಂಬಾಡಿಯವರು ದಿ.ಶ್ರೀಧರ ಗೌಡರ ಬಗ್ಗೆ ಗುಣಗಾನಗೈದು ನುಡಿನಮನ ಸಲ್ಲಿಸಿದರು.
ಆಗಮಿಸಿದ ನೂರಾರು ಜನರು ದಿ.ಶ್ರೀಧರ ಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.


ಈ ಸಂದರ್ಭದಲ್ಲಿ ಪತ್ನಿ ಶ್ರೀಮತಿ ಸೀತಮ್ಮ, ಪುತ್ರ ಹರಿಶ್ಚಂದ್ರ ಕೊಪ್ಪತ್ತಡ್ಕ, ಪುತ್ರಿಯರಾದ ಜಯಶ್ರೀ ಚಿನ್ನಪ್ಪ ದೇವಸ್ಯ, ಶ್ರೀಮತಿ ವಿಮಲಾಕ್ಷಿ ಈರಪ್ಪ ಪಟ್ಟಡ, ಸೊಸೆ,ಅಳಿಯಂದಿರು ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.