ಎ.12: ಬೆಟ್ಟಂಪಾಡಿ ಮಂಜುನಾಥೇಶ್ವರ ಭಜನಾ ಮಂದಿರದ ವಾರ್ಷಿಕಮಹೋತ್ಸವ-ಅರ್ಧ ಏಕಾಹ ಭಜನೆ

0

ಸುಳ್ಯ ಕಸಬಾದ ಬೆಟ್ಟಂಪಾಡಿ ಶ್ರೀ ಮಂಜುನಾಥೇಶ್ವರ ಭಜನಾ ಮಂದಿರದ ಪ್ರತಿಷ್ಠಾ ವಾರ್ಷಿಕ ಮಹೋತ್ಸವ ಹಾಗೂ ದ್ವಿತೀಯ ವರ್ಷದ ಅರ್ಧ ಏಕಾಹ ಭಜನಾ ಕಾರ್ಯಕ್ರಮ ಎ.12 ರಂದುನಡೆಯಲಿರುವುದು.
ಎ.12 ರಂದು ಪ್ರಾತ:ಕಾಲ ಗಣಪತಿ ಹವನವಾಗಿ ಭಜನಾ ಸಂಕೀರ್ತನೆಯ ದೀಪಸ್ಥಾಪನೆಯಾಗಲಿರುವುದು. ನಂತರ ನಾಗತಂಬಿಲವಾಗಿ ಮಧ್ಯಾಹ್ನ ಮಹಾಪೂಜೆಯಾಗಿ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ ಸೂರ್ಯಾಸ್ತದ ವೇಳೆಗೆ ಭಜನಾ ಕಾರ್ಯಕ್ರಮವು ಮಹಾ ಮಂಗಳಾರತಿಯೊಂದಿಗೆ ಸಂಪನ್ನವಾಗಲಿರುವುದು. ರಾತ್ರಿ ವಿಶೇಷವಾಗಿ ದುರ್ಗಾ ಪೂಜೆಯು ನಡೆದು ಮಹಾಪೂಜೆಯಾಗಿ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನಡೆಯಲಿರುವುದು.
ರಾತ್ರಿ ಧಾರ್ಮಿಕ ಸಭೆಯು ಮಂದಿರದ ಅಧ್ಯಕ್ಷ ಕೆ.ನಾರಾಯಣ ರವರ ಅಧ್ಯಕ್ಷತೆಯಲ್ಲಿ ನಡೆಯಲಿರುವುದು. ಶಿಕ್ಷಕಿ ಶ್ರೀಮತಿ ನಳಿನಾಕ್ಷಿ ವಿ. ಆಚಾರ್ಯ ಧಾರ್ಮಿಕ ಉಪನ್ಯಾಸ ನೀಡಲಿರುವರು.
ಪದ್ಮಶ್ರೀ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ್ ಮತ್ತು ರಂಗನಿರ್ದೇಶಕ ಜೀವನ್ ರಾಮ್ ಸುಳ್ಯ ರವರನ್ನು ಸನ್ಮಾನಿಸಲಾಗುವುದು. ಮುಖ್ಯ ಅತಿಥಿಗಳಾಗಿ ಎನ್.ಎ.ರಾಮಚಂದ್ರ, ಶ್ರೀಮತಿ ಲತಾ ಮದುಸೂದನ್, ಮಲ್ಲೇಶ್ ಬೆಟ್ಟಂಪಾಡಿ ಉಪಸ್ಥಿತರಿರುವರು. ಬಳಿಕ ಬಲೆ ತೆಲಿಪಾಲೆ ಖ್ಯಾತಿಯ ಕಲಾಶ್ರೀ ಕುಡ್ಲ ಮಂಗಳೂರು ಕಲಾವಿದರಿಂದ ಕುಸಲ್ದ ಕುರ್ಲರಿ ಹಾಸ್ಯ ಕಾರ್ಯಕ್ರಮ ಪ್ರದರ್ಶನವಾಗಲಿದೆ.