ಯೇನೆಕಲ್ಲು: ಗಾಳಿ ಮಳೆಗೆ ಅಡಿಕೆ ಮರಗಳು ಧರಾಶಾಯಿ

0

ಇಂದು ಸಂಜೆ ಬೀಸಿದ ಭಾರೀ ಗಾಳಿಗೆ ಮಾಜಿ ತಾ.ಪಂ.ಸದಸ್ಯ ಅಶೋಕ್ ನೆಕ್ರಾಜೆಯವರ ತೋಟದಲ್ಲಿ ಅಡಿಕೆ ಮರಗಳು ಧರೆಗುರುಳಿರುವುದಾಗಿ ವರದಿಯಾಗಿದೆ.


ಸಂಜೆ ಸುಮಾರು 4 ಗಂಟೆಯ ಸುಮಾರಿಗೆ ಯೇನೆಕಲ್ಲು ಭಾಗದಲ್ಲಿ ಬೀಸಿದ ಗಾಳಿ ಮಳೆಗೆ ಹಲವು ಕೃಷಿಕರ ತೋಟದಲ್ಲಿ ಅಡಿಕೆ ಮರಗಳು ನಾಶವಾಗಿದೆಯೆಂದು ತಿಳಿದುಬಂದಿದೆ. ಸುಬ್ರಹ್ಮಣ್ಯ ಕ್ಷೇತ್ರದ ತಾ.ಪಂ. ನಿಕಟಪೂರ್ವ ಸದಸ್ಯ ಅಶೋಕ್ ನೆಕ್ರಾಜೆಯವರ ತೋಟದಲ್ಲಿ ಸುಮಾರು 20 ಅಡಿಕೆ ಮರಗಳು ನಾಶವಾಗಿದೆ. ಕಳೆದ ವರ್ಷವೂ ಇದೇ ಸಂದರ್ಭದಲ್ಲಿ ಬೀಸಿದ ಗಾಳಿಗೆ ಸುಮಾರು 150 ಮತ್ತು ಎರಡು

ವರ್ಷಗಳ ಹಿಂದೆ ಸುಮಾರು 300ರಷ್ಟು ಅಡಕೆ ಮರಗಳು ನಾಶವಾಗಿರುವುದಾಗಿ ಸುದ್ದಿಗೆ ತಿಳಿಸಿದರು.