ಸುಳ್ಯದ ‌ಜೆಡಿಎಸ್‌ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ ಆಚರಣೆ

0

ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ರವರ 132ನೇ ಜಯಂತಿಯನ್ನು ಜನತಾದಳ (ಜ್ಯಾ) ಪಕ್ಷದ ವತಿಯಿಂದ ಸುಳ್ಯಸ ಪಕ್ಷದ ಕಛೇರಿಯಲ್ಲಿ ಎ.14 ರಂದು ಆಚರಿಸಲಾಯಿತು.
ಪ.ಜಾತಿ ಹಾಗೂ ಪ.ಪಂಗಡದ ತಾಲೂಕು ಘಟಕದ ಅಧ್ಯಕ್ಷ ಎಂ.ಬಿ. ಚೋಮರವರು ದೀಪ ಬೆಳಗಿಸುವುದರ ಮೂಲಕ ಅಂಬೇಡ್ಕರ್ ರವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ಚಿಂತಕ ಎ.ಕೆ. ಹಿಮಕರ್ ರವರು ಅಂಬೇಡ್ಕರ್ ರವರ ಜೀವನ ಚರಿತ್ರೆ, ಸಾಧನೆ, ಅವರು ಸಮಾಜವನ್ನು ದಿಟ್ಟವಾಗಿ ಎದುರಿಸಿದ ಬಗ್ಗೆ, ಸಮಾಜಕ್ಕೆ ಅವರ ಕೊಡುಗೆ ಬಗ್ಗೆ ಮಾತನಾಡಿದರು. ತದನಂತರ ಅಂಬೇಡ್ಕರ್ ಆದರ್ಶ ಸೇವಾ ಸಮಿತಿಯ ಅಧ್ಯಕ್ಷರಾದ ಸತೀಶ್ ಬೂಡುಮಕ್ಕಿಯವರು ಸಂದರ್ಭೋಚಿತವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷರಾದ ಸುಕುಮಾರ್ ಕೋಡ್ತುಗುಳಿ, ಕಛೇರಿ ಕಾರ್ಯದರ್ಶಿ ಗೋಪಾಲ್ ಪುರ್ಲುಮಕ್ಕಿ, ರಾಮಚಂದ್ರ ಗೌಡ, ಸುನೀಲ್ ಕಾಂತಮಂಗಲ, ಮಂಜುನಾಥ್ ಶಾಂತಿಮೂಲೆ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯದರ್ಶಿ ರಾಕೇಶ್ ಕುಂಟಿಕಾನ ಸ್ವಾಗತಿಸಿ, ವಂದಿಸಿದರು.