ಸಂಪಾಜೆ ಗ್ರಾಮದ ಕಲ್ಲುಗುಂಡಿಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಭೆ ಹಾಗೂ ಮತ ಪ್ರಚಾರವು ಎ.17ರಂದು ಜರುಗಿತು.
ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಸುಳ್ಯ ಮಂಡಲದ ಅಧ್ಯಕ್ಷ ಹರೀಶ್ ಕಂಜಿಪಿಲಿ ಅವರು ಮಾತಾನಾಡಿ , ಬಿಜೆಪಿ ಸರಕಾರ ಇರುವಂತಹ ರಾಜ್ಯಗಳಲ್ಲಿ ಕೊಟ್ಟಂತಹ ಭರವಸೆಯನ್ನು ನ್ಯಾಯ ಸಮ್ಮತವಾಗಿ ಪಕ್ಷವು ಈಡೇರಿಸಿದ್ದು , ಡಬ್ಬಲ್ ಇಂಜಿನ್ ಸರಕಾರದಲ್ಲಿ ಹಲವಾರು ಸ್ತರದಲ್ಲಿ ಸಾಮಾಜಿಕ ಕಾರ್ಯಗಳ ಸಾಧನೆ ಮಾಡಿದಂತಹ ದೇಶದ ದೊಡ್ಡ ದೊಡ್ಡ ಪ್ರಶಸ್ತಿಗಳು ಸಾಮಾನ್ಯರಲ್ಲಿ ಸಾಮಾನ್ಯ ಸಾಧಕರಿಗೆ ಸಿಗುವಂತೆ ಆಗಿದೆ ಎಂದರು.
ಸುಳ್ಯದಲ್ಲಿ ಮೂವತ್ತು ವರುಷಗಳಿಂದ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಿದೆ ಎಂದ ಅವರು ಸಚಿವ ಅಂಗಾರರ ಸಾಧನೆಗಳನ್ನು ತಿಳಿದರು.
ಅಭ್ಯರ್ಥಿ ಕು. ಭಾಗೀರಥಿ ಪರವಾಗಿ ಮಂಡಲ ಪ್ರವಾಸ ಪ್ರಮುಖ್ ಎಸ್,ಎನ್, ಮನ್ಮಥ ಮಾತನಾಡಿ
ಸುಳ್ಯ ವಿಧಾನ ಸಭಾ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡಿ ಅಭಿವೃದ್ಧಿ ಮಾಡಲಾಗಿದೆ. ಇನ್ನಷ್ಟು ಅಭಿವೃದ್ಧಿಗಾಗಿ ಬಿಜೆಪಿ ಅಭ್ಯರ್ಥಿಯನ್ನು ಹೆಚ್ಚಿನ ಮತಗಳಿಂದ ಆಯ್ಕೆ ಮಾಡೋಣ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಮಂಡಲ ಚುನಾವಣಾ ವಿಶೇಷ ಸಂಪರ್ಕ ಪ್ರಮುಖ್ ಎನ್.ಎ. ರಾಮಚಂದ್ರ , ಅರಂತೊಡು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಸುಳ್ಯ ಮಂಡಲದ ಸಾಮಾಜಿಕ ಜಾಲಾತಾಣ ಮತ್ತು ಹೈಟೆಕ್ ಪ್ರಚಾರ ಸಂಚಾಲಕ ಪ್ರಸಾದ್ ಕಾಟೂರು, ಪಕ್ಷದ ಮಹಾಶಕ್ತಿ ಕೇಂದ್ರ ಅಧ್ಯಕ್ಷರು , ಕಾರ್ಯದರ್ಶಿಗಳು, ಶಕ್ತಿ ಕೇಂದ್ರ ಪ್ರಮುಖರು, ಬೂತ್ ನ ವಿವಿಧ ಜವಾಬ್ದಾರಿಯ ಪ್ರಮುಖರು, ಸ್ಥಳೀಯ ಜನಪ್ರತಿನಿಧಿಗಳು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.