ಸುಳ್ಯದ ಕೇರ್ಪಳದಲ್ಲಿ ಹೊಸ ಮನೆ ನಿರ್ಮಾಣ ಕಾಮಗಾರಿಗೆ ಮರಳು ತಂದ ಲಾರಿ ಪಲ್ಟಿಯಾದ ಘಟನೆ ವರದಿಯಾಗಿದೆ.
ಇಂದು ಮಧ್ಯಾಹ್ನ ಪ್ರಸನ್ನರ ಮನೆ ಕಾಮಗಾರಿಗೆ ಮರಳು ತರಲಾಗಿತ್ತು. ಈ ವೇಳೆ ಲಾರಿ ಹಿಂಬದಿ ಚಲಿಸಿ ಬರೆಯಿಂದ ಕೆಳಗೆ ಪಲ್ಟಿಯಾಯಿತು. ಬಳಿಕ ಕ್ರೇನ್ ಮೂಲಕ ಲಾರಿಯನ್ನು ಮೇಲಕ್ಕೆತ್ತಲಾಯಿತು.
ಲಾರಿ ಹಿಂಬದಿ ಜಾರಿಕೊಂಡು ಬರುವಾಗ ದಯಾನಂದ ಕೇರ್ಪಳದ ಗೇಟಿನ ಪಿಲ್ಲರ್ ಗೆ ಬಡಿದು, ಹಾನಿ ಸಂಭವಿಸಿದೆ.