ನಿಂತಿಕಲ್ಲಿನ ಸಮಯಕ್ ಎಂಟರ್ಪ್ರೈಸಸ್ ಗೆ ನೂತನ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ

0

ನಿಂತಿಕಲ್ಲಿನ ಸಾನಿಧ್ಯ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿದ್ದ ಸಮಯಕ್ ಎಂಟರ್ಪ್ರೈಸಸ್ ಗೆ ನೂತನ ಶಾಸಕಿ ಭಾಗೀರಥಿ ಮುರುಳ್ಯರವರು ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕ ಪೆರುವಜೆ ನಿತಿನ್ ರಾಜ್ ಶೆಟ್ಟಿ ಅವರು ಶಾಸಕಿ ಭಾಗೀರಥಿಯವರನ್ನು ಶಾಲು ಹೊದಿಸಿ, ಹಾರರ್ಪಣೆ ಮಾಡಿ ಸ್ವಾಗತಿಸಿದರು.
ನೂತನ ಶಾಸಕಿ ಭಾಗೀರಥಿ ಮುರುಳ್ಯರವರು ಸಂತೋಷ ವ್ಯಕ್ತಪಡಿಸಿ ಮಾತನಾಡಿ, ಸಂಸ್ಥೆಗೆ ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಎಣ್ಮೂರು ಬಿಜೆಪಿ ಅಧ್ಯಕ್ಷ ಯೋಗಾನಂದ ಉಳಲಾಡಿ, ಕಾರ್ಯದರ್ಶಿ ಕಾರ್ತಿಕ್ ರೈ ಕಲ್ಲೇರಿ, ಸವಣೂರು ಬಿಜೆಪಿ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಅನೂಪ್ ಕುಮಾರ್ ಆಳ್ವ, ನ್ಯಾಯವಾದಿ ಹರ್ಷಿತ್ ಕಾರ್ಜ, ಛಾಯ ಚಿಕನ್ ಸೆಂಟರ್ ಮಾಲಕ ಮೋಹನ್ ಕುಮಾರ್, ಕಲ್ಮಡ್ಕ ಪಂಚಾಯತ್ ಸದಸ್ಯ ಲೋಕೇಶ್ ಆಕ್ರಿಕಟ್ಟೆ, ಅಕ್ಷಯ ಟ್ರೇಡರ್ಸ್ ಮಾಲಕ ನವೀನ್ ನಾಯ್ಕ ಸುಳ್ಯ ಇನ್ನಿತರು ಉಪಸಿತರಿದ್ದರು.