ಕೊಲ್ಲಮೊಗ್ರು: ಹಲ್ಲೆ ಪ್ರಕರಣ ನಡೆದಾಗ ಸ್ಥಳದಲ್ಲಿ ಇಲ್ಲದಿದ್ದರೂ ತಂದೆಯ ಮೇಲೆ ಕೇಸು ಹಾಕಲಾಗಿದೆ

0

ಸುಂದರ ಗುಡ್ಡನಮನೆ ಅವರ ಮಗ ಪವನ್ ಹೇಳಿಕೆ

(ಸುಂದರ ಗುಡ್ಡನಮನೆ ಅವರು ಹರಿಹರ ದಲ್ಲಿ ಇದ್ದ ಸಮಯ)

ಮೇ.27 ರಂದು ಕೊಲ್ಲಮೊಗ್ರುವಿನ ಕಟ್ಟ ದಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಹಲ್ಲೆ ನಡೆದಾಗ ಸ್ಥಳದಲ್ಲಿ ನನ್ನ ತಂದೆ ಸುಂದರ ಅವರು ಸ್ಥಳದಲ್ಲಿ ಇಲ್ಲದಿದ್ದರೂ ದುರುದ್ದೇಶದಿಂದ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಸುಂದರ ಗುಡ್ಡನಮನೆ ಅವರ ಮಗ ಪವನ್ ಹೇಳಿಕೆ ನೀಡಿದ್ದಾರೆ.

ಅಂದು ನನ್ನ ತಂದೆ ಗುತ್ತಿಗಾರಿಗೆ ಪೆಟ್ರೋಲ್ ತರಲೆಂದು ಮನೆಯಿಂದ ಹೊರಟಿದ್ದು ಕಲ್ಮಾಕರಿ ಗೆ ಬಂದಾಗ ಸತೀಶ್ ಟಿ.ಎನ್ ರವರು ಸಿಕ್ಕಿದ್ದು ಇವರೊಂದಿಗೆ ತಂದೆಯವರು ಹರಿಹರ ತನಕ ಬರುತ್ತೇನೆಂದು ಸ್ಕೂಟರ್ ಹತ್ತಿರುತ್ತಾರೆ. ದಾರಿ ಮಧ್ಯೆ ಮಣಿಕಂಠ ಕಟ್ಟ ಇವರು ಸತೀಶ್ ಅವರಿಗೆ ಫೋನ್ ಮಾಡಿ ತನ್ನ ಮನೆಗೆ ಬರಹೇಳಿದ್ದು ಸತೀಶ್ ರೊಂದಿಗೆ ನನ್ನ ತಂದೆಯೂ ಮಣಿಕಂಠ ಕಟ್ಟ ರವರ ಮನೆಗೆ ತೆರಳಿ ಸ್ವಲ್ಪದರಲ್ಲೇ ನನ್ನ ತಂದೆಯನ್ನು ಸತೀಶ್ ಅವರು ಹರಿಹರ ಪಲ್ಲತ್ತಡ್ಕ ಕ್ಕೆ ಕರೆದುಕೊಂಡು ಬಂದು ಅವರನ್ನು ಬಿಟ್ಟಿರುತ್ತಾರೆ. ನನ್ನ ತಂದೆ ಅಲ್ಲಿರುವ ಸಮಯದಲ್ಲಿ ಮಣಿಕಂಠ ಹಾಗೂ ಕುಮಾರ ಇವರೊಂದಿಗೆ ಯಾವುದೇ ಹಲ್ಲೆ ನದೆದಿರುವುದಿಲ್ಲ ಹಾಗೂ ನನ್ನ ತಂದೆ ಕುಮಾರ್ ರವರಿಗೆ ಎದುರಾಗಿರುವುದಿಲ್ಲ.


ನನ್ನ ತಂದೆ ಹರಿಹರ ಪಲ್ಲತ್ತಡ್ಕದಲ್ಲಿ ಸಮಯ 11.05 ಇದ್ದು ಅದಕ್ಕೆ ಸಂಬಂಧಿಸಿದ ಇದರ ಸಿ.ಸಿ ಟಿ.ವಿ ಚಿತ್ರದ ದಾಖಲೆಯು ಇದೆ. ತಂದೆಯ ಮೇಲೆ ಈಗಾಗಲೇ ಪೊಲೀಸ್ ಇಲಾಖೆಯವರು FIR ದಾಖಲು ಮಾಡಿರುವುದು ಗೊತ್ತಾಗಿದ್ದು ವೃಥಾ ಆರೋಪ ಹೊರಿಸಿದ ಕುಮಾರ್ ಅವರಿಗೆ ಹಾಗೂ ನನ್ನ ತಂದೆಯ ಹೆಸರನ್ನು ಉಲ್ಲೇಖ ಮಾಡುವಂತೆ ಹೇಳಿ ಕೊಟ್ಟವರಿಗೆ ಕಾರಣಿಕ ದೈವಕ್ಕೆ ಹರಕೆ ಹೇಳುವುದಾಗಿ ಸುಂದರ ಗುಡ್ಡನ ಮನೆ ಅವರ ಮಗ ಪವನ್ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.