ಪುತ್ತೂರು ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘದ ವತಿಯಿಂದ ಮನೆ ಪುನರ್ ರಚಿಸಿ ಹಸ್ತಾಂತರ

0

ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘ ಪುತ್ತೂರು ವತಿಯಿಂದ ಬಾಳಿಲ ಗ್ರಾಮದ ಒಬ್ಬರೇ ವಾಸವಿದ್ದ ಮಹಿಳೆ ಶ್ರೀಮತಿ ರೇವತಿಯಮ್ಮ ಪಂಜಿಗಾರು ಇವರಿಗೆ ಮೇ.28 ರಂದು ಮನೆ ಹಸ್ತಾಂತರ ಮಾಡಲಾಯಿತು.

ಪುತ್ತೂರು ಸಂಘದ ನಿರ್ದೇಶಕರಾದ ಚಂದ್ರಶೇಖರ್ ಭಟ್ ಮುಂಡುಗಾರು ಇವರ ನೇತೃತ್ವದಲ್ಲಿ ಹಳೆ ಮನೆಯನ್ನು 1.25 ಲಕ್ಷ ವೆಚ್ಚದಲ್ಲಿ ಪುನರ್ ರಚಿಸಿ ನಿರ್ಮಿಸಿ ಗಣಹೋಮ ನಡೆಸಿ ನೀಡಲಾಯಿತು.

ಗಣಹೋಮ ಕಾರ್ಯಕ್ರಮವನ್ನು ವೇದಮೂರ್ತಿ ರೋಹಿತ್ ಭಟ್ ಮೊಂತೀಮಾರು ಇವರಿಂದ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಪುತ್ತೂರು ಸಂಘದ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಿತು.

ಆನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಪುತ್ತೂರು ಸಂಘದ ಶತಮಾನೋತ್ಸವ ಸಮಿತಿ ಅಧ್ಯಕ್ಷರು, ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ಧ ಸಹಕಾರಿ ನಿಯಮಿತ ಇದರ ಅದ್ಯಕ್ಷರೂ ಆಗಿರುವ ಎಸ್. ಅರ್. ಸತಿಶ್ಚಂದ್ರ , ಸುಳ್ಯ ಸಂಘದ ಅಧ್ಯಕ್ಷರಾಗಿ ಹೇಮಂತ್ ಕಂದಡ್ಕ, ಪುತ್ತೂರು ಸಂಘದ ಉಪಾಧ್ಯಕ್ಷರಾದ ಹರೀಶ್ ಬೋರ್ಕರ್, ಪಂಜಿಗಾರು, ಶ್ರೀ ಮಹಾಶಕ್ತಿ ದೇವಸ್ಥಾನದ ಆಡಳಿತಮೊಕ್ತೇಸರಾದ ಗೋಪಾಲಕೃಷ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಚಂದ್ರಶೇಖರ್ ಭಟ್, ಶ್ರೀಯುತ ರಾಧಕೃಷ್ಣ ಬೋರ್ಕರ್, ವಾಮನ ಕಾಮತ್ ಇವರನ್ನು ಸನ್ಮಾನಿಸಲಾಯಿತು.
ಚಂದ್ರಶೇಖರ್ ಭಟ್ ಇವರು ಪ್ರಸ್ತಾವಿಕ ಮಾತನಾಡಿ ಎ ಸ್ವಾಗತಿಸಿದರು , ಗೋಪಾಲಕೃಷ್ಣ ಕುಂಟುನಿ ವಂದಿಸಿದರು. ಮೂಲಚಂದ್ರ ಕಾಂಚನ ಕಾರ್ಯಕ್ರಮ ನಿರೂಪಿಸಿದರು.