ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ಔಷಧೀಯ ಗಿಡಗಳ ಉದ್ಯಾನವನದ ಉದ್ಘಾಟನೆ

0

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ದಿನಾಂಕ 5.6.2023 ರಂದು ವನಮಹೋತ್ಸವ ದಿನಾಚರಣೆಯ ಅಂಗವಾಗಿ ಔಷಧೀಯ ಗಿಡಗಳ ಉದ್ಯಾನವನದ ಉದ್ಘಾಟನೆಯನ್ನು ನೆರವೇರಿಸಲಾಯಿತು.

ಈ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ ದಿನೇಶ್ ಪಿ .ಟಿ ಇವರು ವಹಿಸಿಕೊಂಡಿದ್ದಾರೆ. ಉದ್ಯಾನವನದ ಉದ್ಘಾಟನೆಯನ್ನು ಸಾಮಾಜಿಕ ಕಾರ್ಯಕರ್ತರು ಹಾಗೂ ಆರ್ಯಭಟ ಪ್ರಶಸ್ತಿ ಪುರಸ್ಕೃತರು, ಉದ್ಯಾನವನಕ್ಕೆ ಮಣ್ಣು ಹಾಗೂ ಮರಳನ್ನು ನೀಡಿದ ಡಾ. ರವಿ ಕಕ್ಕೆ ಪದವು ಇವರು ನೆರವೇರಿಸಿದರು.

ಅದೇ ರೀತಿ ಉದ್ಯಾನವನಕ್ಕೆ ಮರಳನ್ನು ನೀಡಿದ ದಿನೇಶ್ ಏನೆ ಅತಿಥಿಗಳಾಗಿ ಭಾಗವಹಿಸಿದರು.

ಮಹಾವಿದ್ಯಾಲಯದ ಆಂತರಿಕ ಗುಣಮಟ್ಟ ಕೋಶದ ಸಂಯೋಜಕರಾದ ಡಾ. ಗೋವಿಂದ ಎನ್ ಎಸ್ , ಶ್ರೀ ಕುಮಾರ್ ಶೇಣಿ, ರೇಂಜರ್ಸ್ ಲೀಡರ್ಸ್ ಆಗಿರುವ ಶ್ರೀಮತಿ ಪ್ರಮೀಳಾ, ಉಪನ್ಯಾಸಕ ವರ್ಗದವರು, ಘಟಕದ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಪ್ರಥಮ ಕಲಾ ಪದವಿಯ ಕಲ್ಪನಾ ಕಾರ್ಯಕ್ರಮವನ್ನು ನಿರೂಪಿಸಿದರು. ರಾಷ್ಟ್ರೀಯ ಸೇವಾ ಯೋಜನೆ ಘಟಕದ ಅಧಿಕಾರಿಗಳು ಶ್ರೀಮತಿ ಆರತಿ ಸ್ವಾಗತಿಸಿದರು. ರೋವರ್ಸ್ ಲೀಡರ್ ಆಗಿರುವ ರಾಮ್ ಪ್ರಸಾದ್ ಧನ್ಯವಾದ ಸಮರ್ಪಿಸಿದರು.