ಉಬರಡ್ಕ:ಮರಣ ಸಾಂತ್ವನ ಧನ ಸಹಾಯ ವಿತರಣೆ

0

.

ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರಾಗಿದ್ದು ಜು.21 ರಂದು ನಿಧನರಾದ ಶ್ರೀಮತಿ ಲಕ್ಷ್ಮೀ ಅಮೈ ಇವರಿಗೆ, ಮರಣ ಸಾಂತ್ವನ ನಿಧಿ ರೂ 8000 ವನ್ನು ಮೃತರ ಪುತ್ರ ನವೀನ್ ಅವರಿಗೆ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ದಾಮೋದರ ಗೌಡ ಮದುವೆಗದ್ದೆ ವಿತರಿಸಿ, ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ವಿಜಯಕುಮಾರ್ ಉಬರಡ್ಕ,ಹರಿಪ್ರಸಾದ್ ಪಾನತ್ತಿಲ, ಜಗದೀಶ್ ಕಕ್ಕೆಬೆಟ್ಟು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ಉರುಂಡೆ ಮೊದಲಾದವರು ಉಪಸ್ಥಿತರಿದ್ದರು.