ಕಲ್ಮಕಾರು : ಸರ್ವೋದಯ ಯುವಕ ಮಂಡಲದ ಪದಾಧಿಕಾರಿಗಳ ಆಯ್ಕೆ

0

ಕಲ್ಮಕಾರು ಸರ್ವೋದಯ ಯುವಕ ಮಂಡಲದ ಪದಾಧಿಕಾರಿಗಳ ಆಯ್ಕೆಯು ಕಲ್ಮಕಾರು ಅಂಗನವಾಡಿ ಶಾಲೆಯಲ್ಲಿ ಅ.1 ರಂದು ನಡೆಯಿತು.


ಸುಳ್ಯ ಯುವಜನ ಸಂಯುಕ್ತ ಮಂಡಳಿಯ ನಿರ್ದೇಶಕ ಹಾಗೂ ಜೊತೆ ಕಾರ್ಯದರ್ಶಿ ದಿನೇಶ್ ಹಾಲೆಮಜಲು ಅಧ್ಯಕ್ಷತೆ ವಹಿಸಿದ್ದರು.
ಸಭೆಯಲ್ಲಿ ಮುಂದಿನ ಒಂದು ವರ್ಷದ ಅವಧಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಗೌರವಧ್ಯಕ್ಷರಾಗಿ ವೆಂಕಟ್ರಮಣ ಕೊಪ್ಪಡ್ಕ, ಅಧ್ಯಕ್ಷರಾಗಿ ಡ್ಯಾನಿ ಯಲದಾಳು, ಉಪಾಧ್ಯಕ್ಷರುಗಳಾಗಿ ಹರ್ಷಿತ್ ಪಡ್ಪು, ಸದಾನಂದ ಶಕ್ತಿನಗರ, ಪ್ರಧಾನ ಕಾರ್ಯದರ್ಶಿಯಾಗಿ ಪವನ್ ಗುಡ್ಡನಮನೆ, ಜೊತೆ ಕಾರ್ಯದರ್ಶಿಯಾಗಿ ಸ್ನೇಹಿತ್ ಶಕ್ತಿನಗರ, ಖಜಾಂಜಿಯಾಗಿ ಕುಶಾಲಪ್ಪ ಮೆದುಮನೆ, ಕ್ರೀಡಾ ಕಾರ್ಯದರ್ಶಿಯಾಗಿ ಮನು ಪದ್ನಡ್ಕ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ವಿನೋದ್ ಮಣಿಯಾನ ಮನೆ ಆಯ್ಕೆಯಾದರು.


ಗೌರವ ಸಲಹೆಗಾರರಾಗಿ ಸೋಮಶೇಖರ್ ಬಿಳಿಮಲೆ, ಬೆಳ್ಯಪ್ಪ ಮಣಿಯಾನ ಮನೆ, ಶೇಷಪ್ಪ ಕೊಪ್ಪಡ್ಕ, ಭರತ್ ದೇವಜನ, ನಂದ ಬಿಳಿಮಲೆ, ಧನಂಜಯ ಕಾರುಗೋಡುರವರನ್ನು ಹಾಗೂ ಸದಸ್ಯರನ್ನು ಆಯ್ಕೆ ಮಾಡಲಾಯಿತು.