ಅಂಜಲಿ ಮೊಂಟೆಸ್ಸರಿ ಸ್ಕೂಲ್ ನಲ್ಲಿ ಮಕ್ಕಳ ದಿನಾಚರಣೆ

0

ಪುಟಾಣಿಗಳೊಂದಿಗೆ ನಲಿದು ಖುಷಿ ಪಟ್ಟ ಪೋಷಕರು ಹಾಗೂ ಶಿಕ್ಷಕರು

ಸುಳ್ಯದ ವರ್ತಕರ ಭವನದಲ್ಲಿ ಕಾರ್ಯಚರಿಸುತ್ತಿರುವ ಅಂಜಲಿ ಮೊಂಟೆಸ್ಸರಿ ಸ್ಕೂಲ್ ನಲ್ಲಿ ನ.11 ರಂದು ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದ ಕೇಂದ್ರ ಬಿಂದುವಾಗಿ ಜೀ ಕನ್ನಡ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಇದರ ಕಳೆದ ಸೀಸನ್ ನ ರನ್ನರ್ ಆಫ್ ಆದ ಪ್ರಣನ್ಯ ಕುತ್ಪಾಜೆ ಆಗಮಿಸಿದರು. ವೇದಿಕೆಯಲ್ಲಿ ಶಾಲೆಯ ಪುಟಾಣಿ ಮಕ್ಕಳು , ಶಾಲಾ ಸಂಚಾಲಕಿ ಗೀತಾಂಜಲಿ ಟಿ. ಜಿ., ಪ್ರಣನ್ಯ ಇವರ ಪೋಷಕರಾದ ರಾಧಾಕೃಷ್ಣ ಹಾಗೂ ನಶ್ಮಿತಾ ದಂಪತಿ, ಶಾಲಾ ಪೋಷಕ ಸಮಿತಿ ಪ್ರತಿನಿಧಿ ಶುಶಾನ್ ಹಾಗೂ ಟ್ರಸ್ಟಿ ಚೇತನ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪುಟಾಣಿ ಮಕ್ಕಳು ಮಕ್ಕಳ ದಿನಾಚರಣೆಯ ಕುರಿತು ಮಾತನಾಡಿದರು.
ಬಳಿಕ ಶಾಲೆಯಲ್ಲಿ ಹಮ್ಮಿಕೊಂಡ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಹಾಗೂ ಕೇಕ್ ಕತ್ತರಿಸಿದರೊಂದಿಗೆ ಮಕ್ಕಳ ದಿನಾಚರಣೆಯನ್ನು ಸಂಭ್ರಮಿಸಲಾಯಿತು.

ಬಳಿಕ ಪ್ರಣನ್ಯ ಸೇರಿದಂತೆ ಶಾಲಾ ಮಕ್ಕಳಿಂದ , ಪೋಷಕ ವೃಂದ ದಿಂದ , ಶಿಕ್ಷಕರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಶಾಲಾ ಶಿಕ್ಷಕಿ ನಿರ್ಮಲಾ ನಿರೂಪಿಸಿ, ಪೋಷಕ ವೃಂದ ಪ್ರಾರ್ಥಿಸಿ, ನಿರ್ದೇಶಕಿ ಗೀತಾಂಜಲಿ ಟಿ.ಜಿ ಸ್ವಾಗತಿಸಿ, ಪೋಷಕ ಪ್ರತಿನಿಧಿ ಶುಶಾನ್ ಧನ್ಯವಾದಗಳು ಗೈದರು. ಶಾಲಾ ಸಹಾಯಕಿ ಶ್ವೇತಾ ಸಹಕರಿಸಿದರು.