ಬೆಂಗಳೂರು ಕಂಬಳಕ್ಕೆ ಸುಳ್ಯದಿಂದ ಹೊರಡುವ ಕಂಬಳ ಕೋಣಗಳಿಗೆ ಬೀಳ್ಕೊಡುಗೆ- ಯಜಮಾನರಿಗೆ ಗೌರವಾರ್ಪಣೆ

0

ರಾಜ್ಯ ರಾಜ್ಯಧಾನಿ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ ನ. 25 ಮತ್ತು 26 ರಂದು ನಡೆಯುವ ‘ಬೆಂಗಳೂರು ಕಂಬಳ ನಮ್ಮ ಕಂಬಳ’ ಕ್ಕೆ ಸುಳ್ಯದಿಂದ ಸಂದೀಪ್ ಕಾಂತಮಂಗಲ ಮತ್ತು ಜಗದೀಶ್ ರವರ ಕೋಣಗಳು ಹೊರಟಿದ್ದು, ಕೋಣಗಳಿಗೆ ಬೀಳ್ಕೊಡುಗೆ ಮತ್ತು ಕೋಣಗಳ ಯಜಮಾನರಿಗೆ ಗೌರವಾರ್ಪಣೆಯನ್ನು ಸುಳ್ಯ ರಥಬೀದಿಯ ಪಂಡಿತ್ ಕಾಂಪ್ಲೆಕ್ಸ್ ಬಳಿ ನಡೆಸಲಾಯಿತು.


ಈ ಸಂದರ್ಭದಲ್ಲಿ ಎಂ.ಬಿ.ಸದಾಶಿವ,ಗೋಕುಲ್ ದಾಸ್, ಭವಾನಿಶಂಕರ ಕಲ್ಮಡ್ಕ, ಚೇತನ್ ಕಜೆಗದ್ದೆ, ಸತೀಶ್ ಎಂ.ಕೆ, ಶಾಫಿ ಕುತ್ತಮೊಟ್ಟೆ, ಶಶಿಧರ ಎಂ.ಜೆ, ದಿನೇಶ್ ಸರಸ್ವತಿ ಮಹಲ್, ಮಧುಸೂದನ ಬೂಡು, ಸುಮಂತ್ ಪೈಚಾರ್, ರಜಾಕ್, ಜಬ್ಬಾರ್, ಹರಿಶ್ಚಂದ್ರ ಪಂಡಿತ್, ರಾಜು ಪಂಡಿತ್, ಮಂಜುನಾಥ ಬಳ್ಳಾರಿ, ಸುರೇಶ್ ಪಂಡಿತ್, ಪದ್ಮನಾಭ ಆರ್ಭಡ್ಕ, ದೀಪಕ್ ಕಾಯರ್ತೋಡಿ, ಗಣೇಶ್ ನಾಗಪಟ್ಟಣ ಮೊದಲಾದವರು ಉಪಸ್ಥಿತರಿದ್ದರು.