ವಾಲಸಿರಿ ಮಜಲಿನ ರಸ್ತೆ ಬದಿಯ ಚರಂಡಿಯಲ್ಲಿ ಹರಿಯುತ್ತಿದೆ ಕೊಳಚೆ ನೀರು- ಪರಿಸರವಿಡಿ ದುರ್ನಾತ

0

ಚರಂಡಿಗೆ ಸ್ಲಾಬ್ ಅಳವಡಿಸುವಂತೆ ನಗರ ಪಂಚಾಯತ್ ಮುಖ್ಯಾಧಿಕಾರಿಗೆ ಮನವಿ

ಸುಳ್ಯ ಚೆನ್ನಕೇಶವ ದೇವರ ಜಾತ್ರೋತ್ಸವದ ಸಂದರ್ಭದಲ್ಲಿ ವಾಲಸಿರಿ ಮಜಲಿಗೆ ಹೋಗುವ ದಾರಿ ಬದಿಯ ಚರಂಡಿಯಲ್ಲಿ ಅಂಗಡಿ ಹೋಟೆಲ್ ಗಳಿಂದ ಹರಿದು ಬರುವ
ಕೊಳಚೆ ನೀರಿನಿಂದಾಗಿ ಪರಿಸರವಿಡಿ ದುರ್ನಾತ ಬೀರಿ ಮೂಗು ಮುಚ್ಚಿ ನಡೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.


ಇದರಿಂದ ಈ ಭಾಗದಲ್ಲಿ ವಾಸಿಸುವ ಜನರು ತೊಂದರೆ ಅನುಭವಿಸುವಂತಾಗಿದೆ. ಅಲ್ಲದೆ ಈ ದಾರಿಯಲ್ಲಿ ಜಾತ್ರೋತ್ಸವದ ಸಂದರ್ಭದಲ್ಲಿ ನಾಲ್ಕು ಸ್ಥಾನ ಚಾವಡಿಯಿಂದ ಬಲ್ಲಾಳರ ಪಯ್ಯೋಳಿ ಬರುವುದಲ್ಲದೆ, ಮಿತ್ತೂರು ನಾಯರ್ ಹಾಗೂ ಕಾನತ್ತಿಲ ದೈವಗಳ ಭಂಡಾರ ಬರಲಿರುವುದರಿಂದ ಶೀಘ್ರವಾಗಿ ರಸ್ತೆ ಬದಿಯ ಚರಂಡಿಗೆ ಸ್ಲಾಬ್ ಅಳವಡಿಸಿ ಮುಚ್ಚುವ ಕಾರ್ಯವನ್ನು ನಗರ ಪಂಚಾಯತ್ ಕೈಗೊಳ್ಳಬೇಕೆಂದು
ನಗರ ಪಂಚಾಯತ್ ಮುಖ್ಯಾಧಿಕಾರಿಯವರಿಗೆ ಸ್ಥಳೀಯರಾದ ಬೂಡು ರಾಧಾಕೃಷ್ಣ ರೈ ಯವರು ಮನವಿ ಪತ್ರ ಸಲ್ಲಿಸಿದರು.