ಕೂಜುಗೋಡು ಕಟ್ಟೆಮನೆ ಕುಟುಂಬಸ್ಥರ ವತಿಯಿಂದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹಸಿರುವಾಣಿ

0


ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುವ ಚಂಪಾಷಷ್ಟಿ ಮಹೋತ್ಸವದ ಅಂಗವಾಗಿ ಕೊಪ್ಪರಿಗೆ ಏರುವ ಸುಸಂದರ್ಭದಲ್ಲಿ ಕೂಜುಗೋಡು ಕಟ್ಟೆಮನೆ ತರವಾಡು ಟ್ರಸ್ಟ್ ನೇತೃತ್ವದಲ್ಲಿ ಕುಟುಂಬಸ್ಥರ ಪರವಾಗಿ ಹಸಿರುವಾಣಿ/ಬಲಿವಾಡು ಸಮರ್ಪಿಸಲಾಯಿತು. ತದನಂತರ ಪೂರ್ವ ಪದ್ಧತಿಯಂತೆ ಕುಟುಂಬದ ಹಿರಿಯರಾದ ಪದ್ಮಯ್ಯ ಮತ್ತು ಕುಟುಂಬ ಸದಸ್ಯರು ಕೊಪ್ಪರಿಗೆಗೆ ಅಕ್ಕಿಯನ್ನು ಸಮರ್ಪಿಸಿದರು.

ಈ ಸಂದರ್ಭದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಮೋಹನ್ ರಾಮ್ ಸುಳ್ಳಿ, ಸದಸ್ಯರುಗಳಾದ ಲೋಕೇಶ್, ಶ್ರೀಮತಿ ವನಜಾ ವಿ. ಭಟ್, ಶ್ರೀಮತಿ ಶೋಭಾ ಎಸ್. ಜಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿರಾಜಣ್ಣ ಮತ್ತು ಸಿಬ್ಬಂದಿ ವರ್ಗದವರು, ಕೂಜುಗೋಡು ಕಟ್ಟೆಮನೆ ತರವಾಡು ಟ್ರಸ್ಟಿನ ಅಧ್ಯಕ್ಷರಾದ ಡಾ. ಪುರುಷೋತ್ತಮ ಕೆ.ಜಿ., ಪ್ರಧಾನ ಕಾರ್ಯದರ್ಶಿ ಡಾ. ಸೋಮಶೇಖರ ಕೆ.ಎಲ್., ಕೋಶಾಧಿಕಾರಿ ಲೋಕೇಶ್ ಕೆ.ಎಸ್., ನಿರ್ದೇಶಕರುಗಳಾದ ದಾಮೋದರ ಕೆ.ಎಸ್. ಹೊನ್ನಯ್ಯ ಗೌಡ, ರಾಧಾಕೃಷ್ಣ,ಯತೀಶ್ ಕೆಜೆ ಸೀತಾರಾಮ ಕೆ.ಕೆ. ಸದಸ್ಯರುಗಳಾದ ರಾಮಕೃಷ್ಣ, ಲೋಕೇಶ್, ಚಿದಾನಂದ , ದಿನೇಶ್ ಕೆ.ಎನ್. ಡಾ. ಹರ್ಷಿತ ಪುರುಷೋತ್ತಮ್, ವಸಂತ ಕುಮಾರ್, ಪ್ರಮೋದ್, ಪರಮೇಶ್ವರ, ಲೋಕೇಶ್ ಕೆ. ಜಿ. ಗಿರೀಶ ಕೆ. ಎಸ್. ಅನಿಲ್, ಕಿರಣ್, ಚಿಂತನ್, ಸಚಿನ್, ಸೋಮಶೇಖರ್, ರಕ್ಷಿತ್, ಗಗನ್, ಭವಿತ್, ಧೀರಜ್, ವಿನೀತ್, ಚಿರಾಯು, ರಿತೇಶ್ ಹಾಗೂ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.