ಅಯೋಧ್ಯೆ ಮಂತ್ರಾಕ್ಷತೆಗೆ ಪೇರಾಲು-ಅಂಬ್ರೋಟಿ ಶ್ರೀರಾಮ ಭಜನಾ ಮಂದಿರದಲ್ಲಿ

0

ಪ್ರತೀದಿನ ಪ್ರಾತಕಾಲ ಭಜನೆಯೊಂದಿಗೆ ಪೂಜೆ

ಅಯೋಧ್ಯೆಯಿಂದ ಊರಿಗೆ ತರಲಾಗಿರುವ ಪುಣ್ಯ ಮಂತ್ರಾಕ್ಷತೆಯನ್ನು ಎಲ್ಲ ಕಡೆಯೂ ಆರಾಧನಾ ಕೇಂದ್ರಗಳಲ್ಲಿ ಇಟ್ಟು ಪೂಜೆ ಮಾಡಲಾಗುತ್ತಿದೆ. ಆದರೆ ಮಂಡೆಕೋಲು ಗ್ರಾಮದ ಪೇರಾಲು – ಅಂಬ್ರೋಟಿ‌ ಭಾಗದ ಜನರು ಪ್ರಾತಃ ಕಾಲ ವಿಶೇಷ ಪೂಜೆ ಸಲ್ಲಿಸುತ್ತಿರುವುದು ಗಮನಾರ್ಹ.

ಮಂತ್ರಾಕ್ಷತೆ ತಂದು‌ ಭಜನಾ ಮಂದಿರದಲ್ಲಿ ಇಟ್ಟಲ್ಲಿಂದ ಪ್ರತೀ ದಿನ ಊರ‌ ಭಕ್ತರು ಸುಮಾರು 50ರಷ್ಟು ಮಂದಿ ಪ್ರತೀ ದಿನ ಬೆಳಗ್ಗೆ 5.30 ಕ್ಕೆ ಬಂದು ದೇವರಿಗೆ ದೀಪದಾರತಿ ಬೆಳಗಿ ಭಜನೆ ಮಾಡುತ್ತಿದ್ದಾರೆ.