ಪೊಲೀಸರ ಮೇಲೆ ಕಾರು ಹಾಯಿಸಲು ಪ್ರಯತ್ನಿಸಿ ತಪ್ಪಿಸಿಕೊಂಡಿದ್ದ ಆರೋಪಿ ಆಕಾಶಭವನ ಶರಣ್ ಗೆ ಪೋಲೀಸರಿಂದ ಗುಂಡು

0

ಕಾಲಿಗೆ ಏಟಾದ ಶರಣ್ ಬಂಧನ

ಕಳೆದ ವಾರ ತನ್ನನ್ನು ಹಿಡಿಯಬಂದ ಪೋಲೀಸರ ಮೇಲೆ ಕಾರು ಚಲಾಯಿಸಲು ಪ್ರಯತ್ನಿಸಿ ಪೋಲೀಸರಿಂದ ತಪ್ಪಿಸಿಕೊಂಡಿದ್ದ ಆಕಾಶಭವನ ಶರಣ್ ಎಂಬ ವ್ಯಕ್ತಿಗೆ ಮಂಗಳೂರು ಪೋಲೀಸರು ಗುಂಡು ಹಾರಿಸಿದ್ದಾರೆಂದು ತಿಳಿದುಬಂದಿದ್ದು, ಕಾಲಿಗೆ ಗಾಯವಾದ ಶರಣ್ ನನ್ನು ಬಂಧಿಸಿ ಆಸ್ಪತ್ರೆಗೆ ಸೇರಿಸಿದ್ದಾರೆಂದು ಗೊತ್ತಾಗಿದೆ.

ಇಂದು ಆತನನ್ನು ಬಂಧಿಸಲು ಪೋಲೀಸರು ಹೋದಾಗ ಆತ ಪರಾರಿಯಾಗಲು ಪ್ರಯತ್ನಿಸಿದನೆನ್ನಲಾಗಿದ್ದು ಆ ವೇಳೆ ಫೈರಿಂಗ್ ಮಾಡಿದ್ದಾರೆ. ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಆಕಾಶಭವನ ಶರಣ್ ವಿರುದ್ದ ಕೊಲೆ, ಸುಲಿಗೆ, ಅತ್ಯಾಚಾರದಂತಹ 21 ಪ್ರಕರಣಗಳು ದಾಖಲಾಗಿದ್ದವು. ಕೆವಿಜಿ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿಯಾಗಿದ್ದ ಪ್ರೊ.ರಾಮಕೃಷ್ಣ ಅವರ ಕೊಲೆ ಪ್ರಕರಣದಲ್ಲಿ ಆತ ಪ್ರಮುಖ ಆರೋಪಿಯಾಗಿದ್ದ. ಆತನ ಅಪರಾಧ ಸಾಬೀತಾಗಿ ಶಿಕ್ಷೆ ಘೋಷಿಸಲೆಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ನ್ಯಾಯಾಲಯ ಸೂಚನೆ ನೀಡಿದ್ದಾಗ, ಬೇರೆಲ್ಲರೂ ಬಂದಿದ್ದರೂ ಈತ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ.