ಪೆರಾಜೆ – ಬಿಳಿಯಾರಿನಲ್ಲಿ ಕಾಡಾನೆ ಪ್ರತ್ಯಕ್ಷ

0

ಮುಂಜಾನೆ ಗಜರಾಜ ದರ್ಶನದಿಂದ ಬೆಚ್ಚಿದ ಜನತೆ

ನಿಡ್ಯಮಲೆ ಕಡೆಯಿಂದ ಪೆರಾಜೆಗೆ ಬಂದು ಬಿಳಿಯಾರು ಭಾಗದಲ್ಲಿ ಒಂಟಿ ಸಲಗವೊಂದು ದಾಟಿದ ಘಟನೆ ಇಂದು ಬೆಳಿಗ್ಗೆ ವರದಿಯಾಗಿದೆ.

ಬೆಳಿಗ್ಗೆ 8 ಗಂಟೆ 10 ನಿಮಿಷಕ್ಕೆ ಪೆರಾಜೆ ದಿವಾಕರ ರೈಯವರ ಗದ್ದೆಗೆ ಬಂದು ಬಳಿಕ ಅಲ್ಲಿಂದ ಬಿಳಿಯಾರು ರಸ್ತೆಗಾಗಿ ಪೂಮಲೆ ಕಾಡಿನತ್ತ ದಾಟಿದೆ.

ನಿಡ್ಯಮಲೆ – ಪೀಚೆ – ಮೂಲೆಮಜಲು – ದೇಶ ಕೋಡಿ ಗಾಗಿ ಆನೆ ಬಂದಿದೆ ಎಂದು ತಿಳಿದು ಬಂದಿದೆ.

ಮೂಲೆಮಜಲು ಧನಂಜಯ ಎಂಬವರು ಪೆರಾಜೆ ಪೇಟೆಗೆ ಬರಲು ಬೈಕು ಸ್ಟಾಟ್ ಮಾಡುತ್ತಿದ್ದಾಗ ಒಂಟಿ ಸಲಗ ಎದುರಾಗಿ ಬಂದಿದೆ. ಆಗ ಬೆಚ್ಚಿ ಬಿದ್ದ ಅವರು ತಕ್ಷಣ ಬೈಕನ್ನು ಬಿಟ್ಟು ಓಡಿ ತಪ್ಪಿಸಿಕೊಂಡಿದ್ದಾರೆ.

ದೊಡ್ಡಡ್ಕದಲ್ಲಿ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವ ಒಮ್ನಿ ಕಾರಿಗೆ ಹಾನಿ ಮಾಡಿದೆ. ಆ ಸಂದರ್ಭದಲ್ಲಿ ಕಾರಿನಲ್ಲಿ ಒಂದು ಮಗು ಮತ್ತು ಡ್ರೈವರ್ ಮಾತ್ರ ಇದ್ದು ಅವರು ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ‌.