p>

ಆಲೆಟ್ಟಿ: ಪಂಜಿಮಲೆ ಒತ್ತೆಕೋಲ- ಯಕ್ಷಗಾನ ಬಯಲಾಟದ ಕರ ಪತ್ರ ಬಿಡುಗಡೆ

0

ಆಲೆಟ್ಟಿ ಪಂಜಿಮಲೆ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲವು ಫೆ.19 ರಂದು ನಡೆಯಲಿದ್ದು ಗುಂಡ್ಯ ಜನನಿ ಫ್ರೆಂಡ್ಸ್ ಕ್ಲಬ್ ಆಶ್ರಯದಲ್ಲಿ ಸಾಂಸ್ಕೃತಿಕ ಅಂಗವಾಗಿ ಬಪ್ಪನಾಡು ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯವರಿಂದ ಶಿವದೂತೆ ಗುಳಿಗೆ ಎಂಬ ಯಕ್ಷಗಾನ ಬಯಲಾಟ ಹಮ್ಮಿಕೊಳ್ಳಲಾಗಿದ್ದು ಇದರ ಕರ ಪತ್ರವನ್ನು ಇಂದು ಸದಾಶಿವ ದೇವಳದಲ್ಲಿ ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ದೇವಳದ ಅರ್ಚಕ ಹರ್ಷಿತ್ ಬನ್ನಿಂತಾಯ, ರಘುರಾಮಕಡಂಬಳಿತ್ತಾಯ, ಒತ್ತೆಕೋಲ ಸಮಿತಿ ಅಧ್ಯಕ್ಷ ಸುಧಾಕರ ಆಲೆಟ್ಟಿ, ಕಾರ್ಯದರ್ಶಿರಾಮಚಂದ್ರ ಆಲೆಟ್ಟಿ, ನಾರಾಯಣ ರೈ ಆಲೆಟ್ಟಿ, ಲಕ್ಷ್ಮಣ ಗೌಡ ಪರಿವಾರ, ಕ್ಲಬ್ ಗೌರವಾಧ್ಯಕ್ಷ ಲತೀಶ್ ಗುಂಡ್ಯ, ನಿತಿನ್ ಗುಂಡ್ಯ,ಸದಸ್ಯರಾದ ವಿಷ್ಣುಪ್ರಸಾದ್ ಗುಂಡ್ಯ, ರೂಪಾನಂದ ಗುಂಡ್ಯ ಮತ್ತಿತರರು ಉಪಸ್ಥಿತರಿದ್ದರು.