ಪೆರಾಜೆ: ಬಿಜೆಪಿ ಶಕ್ತಿ ಕೇಂದ್ರ ಮಾಸಿಕ ಸಭೆ – ಸನ್ಮಾನ

0

ಬಿಜೆಪಿ ಶಕ್ತಿ ಕೇಂದ್ರ ಪೆರಾಜೆ ಇದರ ಮಾಸಿಕ ಸಭೆ ಈ ದಿನ  ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು . ಈ ಸಂದರ್ಭದಲ್ಲಿ ಮಡಿಕೇರಿ ಗ್ರಾಮಾಂತರ   ಮಂಡಲದ  ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾದ   ಶ್ರೀ ನಾಗೇಶ್ ಕುಂದಲ್ಪಾಡಿ ಅವರಿಗೆ  ಗೌರವಪೂರ್ಣ ಸನ್ಮಾನ  ನೆರವೇರಿಸಲಾಯಿತು.

ನೂತನ ಅಧ್ಯಕ್ಷರು ಮಾತನಾಡಿ  ಸವಾಲಿನ ಸಂದರ್ಭದಲ್ಲಿ   ಪಕ್ಷದ ಜವಾಬ್ಧಾರಿ  ಹೆಗಲಮೇಲೆ ಹೊತ್ತುಕೊಂಡು ಎಲ್ಲಾ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಸಿಕೊಂಡು ಹೋಗುತ್ತೇನೆ. ಮಡಿಕೇರಿ ತಾಲೂಕು ಮಟ್ಟದಲ್ಲಿ ಬಿಜೆಪಿಯನ್ನು ಇನ್ನೂ ಹೆಚ್ಚು ಸದೃಢವಾಗಿ ಬೆಳೆಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ನಿಮ್ಮೆಲ್ಲರ ಸಹಕಾರ ಬೇಕು ಎಂದು ಹೇಳಿದರು.